ಚಿಕ್ಕಬಳ್ಳಾಪುರದಲ್ಲಿ ಜಾತಿಗಣತಿಗೆ ಹೋಗಿದ್ದ ಶಿಕ್ಷಕಿ ಮೇಲೆ ಸಾಕು ನಾಯಿ ದಾಳಿ.

ಚಿಕ್ಕಬಳ್ಳಾಪುರದಲ್ಲಿ ಜಾತಿಗಣತಿಗೆ ಹೋಗಿದ್ದ ಶಿಕ್ಷಕಿ ಮೇಲೆ ಸಾಕು ನಾಯಿ ದಾಳಿ.

ಚಿಕ್ಕಬಳ್ಳಾಪುರ: ರಾಜ್ಯಾದ್ಯಾಂತ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿಗಣತಿ ಸಮೀಕ್ಷೆಯಲ್ಲಿ ಭಾಗವಹಿಸಲು ಹೋಗಿದ್ದ ಶಿಕ್ಷಕಿ ರಂಜಿನಿ ಮೇಲೆ ಚಿಕ್ಕಬಳ್ಳಾಪುರ ನಗರದ ತಿಮ್ಮಕ್ಕ ಬಡಾವಣೆಯಲ್ಲಿ ಸಾಕು ನಾಯಿ ದಾಳಿ ನಡೆದಿದೆ. ಪಿಡಿಒ ನಾರಾಯಣಸ್ವಾಮಿ ಅವರ ಮನೆಯನ್ನು ಸಮೀಕ್ಷೆಗೈದು ಬಂದಾಗ ಜರ್ಮನ್ ಶೆಫರ್ಡ್ ನಾಯಿ ಆಕ್ರಮಣ ನಡೆಸಿದ್ದು, ಶಿಕ್ಷಕಿ ಗಾಯಗೊಂಡಿದ್ದಾರೆ.

ಇಂತಹ ಜಾತಿಗಣತಿ ಸಮೀಕ್ಷೆಗಳಲ್ಲಿ ತಾಂತ್ರಿಕ ಸವಾಲುಗಳು ಮತ್ತು ಬೆಂಬಲದ ಕೊರತೆಯ ಜೊತೆಗೆ ಭೌತಿಕ ಅಪಾಯಗಳೂ ಎದುರಾಗುತ್ತಿರುವುದು ಆಘಾತಕಾರಿಯಾಗಿದೆ. ಘಟನೆ ಸಂಬಂಧ ಇನ್ನಷ್ಟು ತನಿಖೆ ನಡೆಯುತ್ತಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *