ತಮಿಳು ನಟ ಹಾಗೂ ರಾಜಕಾರಣಿ ಥಲಪತಿ ವಿಜಯ್ ಅವರ ತೀವ್ರ ಹೇಳಿಕೆಯ ಬೆನ್ನಲ್ಲೇ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಅವರು ಕಚ್ಚತೀವು ದ್ವೀಪಕ್ಕೆ ದಿಢೀರ್ ಭೇಟಿ ನೀಡಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಅಗಸ್ತು 21ರಂದು ಮಧುರೈನಲ್ಲಿ ನಡೆದ ರ್ಯಾಲಿಯಲ್ಲಿ, ವಿಜಯ್, “ಕಚ್ಚತೀವು ದ್ವೀಪವನ್ನು ಹಿಂದಕ್ಕೆ ಪಡೆಯಬೇಕು” ಎಂಬ ತೀವ್ರ ಘೋಷಣೆಯನ್ನು ನೀಡಿದ್ದರು. “ನಾವು ಹೆಚ್ಚಿನದನ್ನು ಕೇಳುತ್ತಿಲ್ಲ, ಕೇವಲ ನಮ್ಮ ಮೀನುಗಾರರ ಸುರಕ್ಷತೆಗಾಗಿ ಕಚ್ಚತೀವ್ ಹಿಂಪಡೆಯಿರಿ,” ಎಂಬುದಾಗಿ ಪ್ರಧಾನಿ ಮೋದಿಯನ್ನು ಉದ್ದೇಶಿಸಿ ಹೇಳಿದರು.
ಇದಾದ ಕೇವಲ ಕೆಲವೇ ದಿನಗಳಲ್ಲಿ, ಶ್ರೀಲಂಕಾ ಅಧ್ಯಕ್ಷ ದಿಸಾನಾಯಕೆ, ಜಾಫ್ನಾದಿಂದ ನೌಕಾಪಡೆಯ ಸ್ಪೀಡ್ಬೋಟಿನಲ್ಲಿ ಪ್ರಯಾಣಿಸಿ ಕಚ್ಚತೀವು ದ್ವೀಪಕ್ಕೆ ಭೇಟಿ ನೀಡಿದ್ದು, ಈ ದ್ವೀಪಕ್ಕೆ ಭೇಟಿ ನೀಡಿದ ಮೊದಲ ಶ್ರೀಲಂಕಾ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
“ಕಚ್ಚತೀವು ಶ್ರೀಲಂಕಾದ ಅವಿಭಾಜ್ಯ ಅಂಗ” — ಅಧ್ಯಕ್ಷ ದಿಸಾನಾಯಕೆ
ದ್ವೀಪದಲ್ಲಿರುವ ಶ್ರೀಲಂಕಾ ನೌಕಾಪಡೆಯ ನೆಲೆಗೂ ಭೇಟಿ ನೀಡಿದ ಅವರು, “ಕಚ್ಚತೀವು ನಮ್ಮ ದೇಶದ ಅವಿಭಾಜ್ಯ ಭಾಗ. ನಮ್ಮ ಭೂಮಿ, ಸಮುದ್ರ, ದ್ವೀಪಗಳು ಮತ್ತು ಆಕಾಶವನ್ನು ರಕ್ಷಿಸುವುದು ನನ್ನ ಕರ್ತವ್ಯ” ಎಂದು ಘೋಷಿಸಿದರು.
ಶ್ರೀಲಂಕಾ ಮೀನುಗಾರರ ಅಗತ್ಯತೆ ಹಾಗೂ ವಿದೇಶಿ ಅತಿಕ್ರಮಣದ ವಿರುದ್ಧ ನಿಲುವು ತಾಳಲು ಈ ದ್ವೀಪ ಬಹುಮುಖ್ಯವಾಗಿದೆ ಎಂಬುದಾಗಿ ಅವರು ತಿಳಿಸಿದರು.
ಕಚ್ಚತೀವು ವಿವಾದ – ಮರುಹೊರಳಿದೇನಾ?
1.9 ಚದರ ಕಿ.ಮೀ. ವಿಸ್ತೀರ್ಣವಿರುವ ಕಚ್ಚತೀವು ದ್ವೀಪ, ಭಾರತ-ಶ್ರೀಲಂಕಾ ಗಡಿಯಲ್ಲಿದ್ದು, ರಾಮೇಶ್ವರದಿಂದ 12 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದೆ.ಈ ದ್ವೀಪವು ಭೌಗೋಳಿಕವಾಗಿ ಭಾರತದ ಹತ್ತಿರವಿದ್ದರೂ, 1974ರಲ್ಲಿ ನಡೆದ ಒಪ್ಪಂದದನ್ವಯ ಶ್ರೀಲಂಕಾ ಅಧಿಕಾರಕ್ಕೆ ಹೋಯಿತು. ಇತ್ತೀಚೆಗೆ ಈ ವಿಷಯವು ಮತ್ತೆ ರಾಜಕೀಯ ವಲಯದಲ್ಲಿ ಚರ್ಚೆಗೆ ಎಳೆದಿದೆ.
For More Updates Join our WhatsApp Group :
