ಸತ್ತ ಅಮ್ಮ ಕನಸಿನಲ್ಲಿ ಬಂದು ಕರೆದಳೆಂದು ಆತ್ಮಹ*ತ್ಯೆ ಮಾಡಿಕೊಂಡ 16 ವರ್ಷದ ಬಾಲಕ!

ಸತ್ತ ಅಮ್ಮ ಕನಸಿನಲ್ಲಿ ಬಂದು ಕರೆದಳೆಂದು ಆತ್ಮಹ*ತ್ಯೆ ಮಾಡಿಕೊಂಡ 16 ವರ್ಷದ ಬಾಲಕ!

ಸೋಲಾಪುರ : ಆತ 10ನೇ ತರಗತಿಯಲ್ಲಿ ಶೇ. 92ರಷ್ಟು ಅಂಕ ಪಡೆದಿದ್ದ ಪ್ರತಿಭಾನ್ವಿತ ವಿದ್ಯಾರ್ಥಿ. ಕೆಲವು ತಿಂಗಳ ಹಿಂದಷ್ಟೇ ಪಿಯುಸಿಗೆ ಸೇರಿದ್ದ. ನೀಟ್ ಪರೀಕ್ಷೆಗೆ ತಯಾರಿ ಕೂಡ ನಡೆಸುತ್ತಿದ್ದ. ಆದರೆ, ಆತನ ಭವಿಷ್ಯ ಅರಳುವ ಮೊದಲೇ ಕಮರಿಹೋಗಿದೆ. ಕನಸಿನಲ್ಲಿ ಬಂದು ಅಮ್ಮ ಕರೆದಳು ಎಂಬ ಕಾರಣಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡು ತಾಯಿಯ ಬಳಿ ಹೋಗಿದ್ದಾನೆ! ಮಹಾರಾಷ್ಟ್ರದ ಸೋಲಾಪುರದಲ್ಲಿ ಈ ದಾರುಣ ಘಟನೆ ನಡೆದಿದೆ.

ತಾಯಿಯ ಇತ್ತೀಚಿನ ಸಾವಿನಿಂದ ಮನನೊಂದ 16 ವರ್ಷದ ಬಾಲಕ ಶಿವಶರಣ್ ಇಂದು ಮಹಾರಾಷ್ಟ್ರದ ಸೋಲಾಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿವಶರಣ್ ಭೂತಾಲಿ ಟಾಲ್ಕೋಟಿ ಎಂಬ ಬಾಲಕ ತನ್ನ ಚಿಕ್ಕಪ್ಪನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹುಡುಗನ ತಾಯಿ 3 ತಿಂಗಳ ಹಿಂದೆ ಕಾಮಾಲೆ ರೋಗದಿಂದ ಸಾವನ್ನಪ್ಪಿದ್ದರು. ಆತನ ಸಾವನ್ನಪ್ಪಿದ ಸ್ಥಳದಲ್ಲಿ ಸೂಸೈಡ್ ನೋಟ್ ಸಿಕ್ಕಿದೆ. ಅದರಲ್ಲಿ ಆ ಹುಡುಗ ತನ್ನ ತಾಯಿಯ ಕನಸು ಕಂಡಿದ್ದಾಗಿ ಬರೆದಿದ್ದಾನೆ. ನಾನು ಅಮ್ಮನ ಬಳಿ ಬರಬೇಕೆಂದು ಅಮ್ಮ ನನ್ನನ್ನು ಕರೆದರು. ಹೀಗಾಗಿ, ಅವಳ ಬಳಿ ಹೋಗುತ್ತಿದ್ದೇನೆ ಎಂದು ಆತ ಬರೆದಿದ್ದಾನೆ.

‘ನಾನು ಶಿವಶರಣ. ನನಗೆ ಬದುಕಲು ಇಷ್ಟವಿಲ್ಲವಾದ್ದರಿಂದ ನಾನು ಸಾಯುತ್ತಿದ್ದೇನೆ. ನನ್ನ ತಾಯಿ ಹೋದಾಗಲೇ ನಾನು ಹೋಗಬೇಕಿತ್ತು, ಆದರೆ ನಾನು ನನ್ನ ಚಿಕ್ಕಪ್ಪ ಮತ್ತು ಅಜ್ಜಿಯ ಮುಖ ನೋಡುತ್ತಾ ಜೀವಂತವಾಗಿದ್ದೆ. ನನ್ನ ಸಾವಿಗೆ ಕಾರಣ ನಿನ್ನೆ ನನ್ನ ತಾಯಿ ನನ್ನ ಕನಸಿನಲ್ಲಿ ಬಂದರು. ನಾನು ಯಾಕೆ ತುಂಬಾ ಬೇಸರವಾಗಿದ್ದೇನೆ ಎಂದು ಕೇಳಿದ ಅಮ್ಮ ನನ್ನನ್ನು ಅವಳ ಬಳಿಗೆ ಬರಲು ಹೇಳಿದ್ದರು. ಹಾಗಾಗಿ ನಾನು ಸಾಯುವ ಬಗ್ಗೆ ಯೋಚಿಸಿದೆ. ನನ್ನ ಚಿಕ್ಕಪ್ಪ ಮತ್ತು ಅಜ್ಜಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ, ಏಕೆಂದರೆ ಅವರು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು” ಎಂದು ಸೂಸೈಡ್ ನೋಟ್​​ನಲ್ಲಿ ಆತ ಬರೆದಿದ್ದಾನೆ.

“ಚಿಕ್ಕಪ್ಪ, ನಾನು ಸಾಯುತ್ತಿದ್ದೇನೆ. ನಾನು ಹೋದ ನಂತರ, ನನ್ನ ತಂಗಿಯನ್ನು ಸಂತೋಷವಾಗಿಡಿ. ಚಿಕ್ಕಪ್ಪ, ನಾನು ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ಅಜ್ಜಿಯನ್ನು ಅಪ್ಪನ ಬಳಿಗೆ ಕಳುಹಿಸಬೇಡಿ. ಎಲ್ಲರೂ, ನಿಮ್ಮ ಬಗ್ಗೆ ಕಾಳಜಿ ವಹಿಸಿ. ನನ್ನ ಹೆತ್ತವರಿಗಿಂತ ನೀವು ನನಗಾಗಿ ಹೆಚ್ಚಿನ ಪ್ರೀತಿ ತೋರಿಸಿದ್ದೀರಿ” ಎಂದು ಆತ ಬರೆದಿದ್ದಾನೆ.

Leave a Reply

Your email address will not be published. Required fields are marked *