ಮುಂಬೈ : ಹಿಂದಿ ಧಾರಾವಾಹಿ ಜಗತ್ತಿನಲ್ಲಿ ತಮ್ಮ ಶಕ್ತಿಶಾಲಿ ಅಭಿನಯದಿಂದ ದಿಟ್ಟ ಗುರುತು ಮೂಡಿಸಿದ್ದ ಹಿರಿಯ ನಟ ಪಂಕಜ್ ಧೀರ್ ಇಂದು (ಅ.15) ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ಕ್ಯಾನ್ಸರ್ ಸೋಂಕಿನಿಂದ ಪೀಡಿತರಾಗಿದ್ದ ಅವರು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಪಟ್ಟರೂ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
‘ಕರ್ಣ’ನಿಂದ ಕನ್ನಡದ ‘ವಿಷ್ಣುಸೇನ’ವರೆಗೆ: ಪಂಕಜ್ ಧೀರ್ರ ನಟನಾ ಪಯಣ
ಪಂಕಜ್ ಧೀರ್ ತಮ್ಮ ಚೊಚ್ಚಲ ಯಶಸ್ಸನ್ನು ಬಿಆರ್ ಚೋಪ್ರಾ ನಿರ್ದೇಶನದ ಮಹಾಭಾರತ ಧಾರಾವಾಹಿಯ “ಕರ್ಣ” ಪಾತ್ರದಿಂದ ಗಳಿಸಿದ್ದರು. ಈ ಪಾತ್ರ ಅವರ ಹೆಸರು ಮನೆಮಾತಾಗುವಂತೆ ಮಾಡಿತ್ತು. ನಂತರ ‘ಚಂದ್ರಕಾಂತ’, ‘ಸಸುರಾಲ್ ಸಿಮರ್ ಕಾ’, ‘ದೇವೋಂಕ ದೇವ್ ಮಹಾದೇವ್’ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಅವರು ಮಹತ್ವದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಕನ್ನಡ ಚಿತ್ರರಂಗದೊಂದಿಗೆ ಅವರ ವಿಶೇಷ ಸಂಬಂಧವೂ ಇದೆ. ವರಿಷ್ಠ ನಟ ವಿಷ್ಣುವರ್ಧನ್ ಜೊತೆ ಅವರು ‘ವಿಷ್ಣು ವಿಜಯ’ ಮತ್ತು ‘ವಿಷ್ಣುಸೇನ’ ಸಿನಿಮಾಗಳಲ್ಲಿ ನಟಿಸಿದ್ದರು. ಈ ಸಿನಿಮಾಗಳಲ್ಲಿ ಅವರು ತೀವ್ರ ಮನೋಭಾವನೆಯ ಪಾತ್ರಗಳನ್ನು ನಿಭಾಯಿಸಿದ್ದರು. ಅಲ್ಲದೇ, ಎಂಎಸ್ ಸತ್ಯು ನಿರ್ದೇಶನದ ಕಲ್ಟ್ ಕ್ಲಾಸಿಕ್ ‘ಬರ’ ಚಿತ್ರದಲ್ಲೂ ಅಭಿನಯಿಸಿದ್ದರು.
ಬಾಲಿವುಡ್ನಲ್ಲಿ ಖ್ಯಾತ ನಟರೊಂದಿಗೆ ಅಭಿನಯ
ಪಂಕಜ್ ಧೀರ್ ಅವರು ಬಾಲಿವುಡ್ನೂ ಕೂಡ ತಮ್ಮ ಅಭಿನಯದಿಂದ ಮೋಡಿ ಮಾಡಿದವರು. ಶಾರುಖ್ ಖಾನ್ (ಬಾದ್ಶಾ), ಸಲ್ಮಾನ್ ಖಾನ್ (ಸನಮ್ ಬೇವಫಾ), ಸಂಜಯ್ ದತ್ (ಸಡಕ್), ಅಕ್ಷಯ್ ಕುಮಾರ್ (ಇಕ್ಕೆ ಪೆ ಇಕ್ಕಾ) ಸೇರಿದಂತೆ ಅನೇಕ ಸ್ಟಾರ್ಗಳ ಜತೆಗೆ ನಟಿಸಿದ್ದಾರೆ.
2024 ರ ‘ಧ್ರುವ ತಾರ’ ಧಾರಾವಾಹಿ ಅವರು ಅಭಿನಯಿಸಿದ ಕೊನೆಯ ಧಾರಾವಾಹಿಯಾಗಿತ್ತು.
ನಟ ಪುತ್ರ ನಿಕೆಟ್ನ್ ಧೀರ್ ಕೂಡ ಚಿತ್ರರಂಗದಲ್ಲೇ
ಪಂಕಜ್ ಧೀರ್ ಪುತ್ರ ನಿಕೆಟ್ನ್ ಧೀರ್ ಕೂಡ ಬಾಲಿವುಡ್, ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರು ಕನ್ನಡದ ‘ಮಾರ್ಟಿನ್’ (ಧ್ರುವ ಸರ್ಜಾ ನಟನೆಯ) ಚಿತ್ರದಲ್ಲಿ ವಿಲನ್ ಪಾತ್ರ ನಿರ್ವಹಿಸಿದ್ದಾರೆ.
ಪಂಕಜ್ ಧೀರ್ ಅವರ ಸೇವೆಗೆ ಚಿತ್ರರಂಗದಿಂದ ಶ್ರದ್ಧಾಂಜಲಿ
ಅಭಿನಯ ಕ್ಷೇತ್ರದಲ್ಲಿ ಅಮೂಲ್ಯ ಕೊಡುಗೆ ನೀಡಿದ ಪಂಕಜ್ ಧೀರ್ ನಿಧನಕ್ಕೆ ಚಿತ್ರರಂಗದ ಗಣ್ಯರಿಂದ ಶೋಕ ವ್ಯಕ್ತವಾಗಿದೆ. ಅವರ ನಟನೆಯ ನೆನಪು ಹಾಗೂ ಪಾತ್ರಗಳು, ಭಾರತೀಯ ಪ್ರेಕ್ಷಕರ ಮನಸಿನಲ್ಲಿ ಎಂದೆಂದಿಗೂ ಅಮರವಾಗಿರುತ್ತವೆ.
For More Updates Join our WhatsApp Group :




