ಹೆಣ್ಣೂರಲ್ಲಿ ನಿದ್ರಿಸಿದ್ದ ಬಾಲಕ ಕ್ಯಾಬ್‌ನಲ್ಲಿ ಮರೆತುಹೋದ ಘಟನೆ.

ಹೆಣ್ಣೂರಲ್ಲಿ ನಿದ್ರಿಸಿದ್ದ ಬಾಲಕ ಕ್ಯಾಬ್‌ನಲ್ಲಿ ಮರೆತುಹೋದ ಘಟನೆ.

‘ನಮ್ಮ 112’ ಸಹಾಯದಿಂದ 1 ಗಂಟೆಯಲ್ಲಿ ಸುರಕ್ಷಿತ ರಕ್ಷಣೆ.

ಬೆಂಗಳೂರು: ನಿದ್ರಿಸಿದ್ದ ಮಗುವನ್ನು ಮರೆತು ಕ್ಯಾಬ್​​ನಲ್ಲಿಯೇ ಪೋಷಕರು ಬಿಟ್ಟು ಹೋಗಿರುವ ಪ್ರಕರಣ ಬೆಂಗಳೂರಿನ ಹೆನ್ನೂರಲ್ಲಿ ನಡೆದಿದೆ. ಬಳಿಕ ಪೊಲೀಸರ ಸಹಾಯದಿಂದ ಕ್ಯಾಬ್​​ ಪತ್ತೆ ಮಾಡಿ ಮಗುವಿನ ರಕ್ಷಣೆ ಮಾಡಲಾಗಿದ್ದು ಪ್ರಕರಣ ಸುಖಾಂತ್ಯ ಕಂಡಿದೆ. ಪೊಲೀಸರು ತಲುಪುವ ಮೊದಲು ಅದಾಗಲೇ ಮತ್ತೆರಡು ಟ್ರಿಪ್​​ಗಳನ್ನು ಚಾಲಕ ಪೂರೈಸಿದ್ದರೂ ಆತನಿಗಾಗಲೀ ಅಥವಾ ಇತರ ಪ್ರಯಾಣಿಕರಿಗಾಗಲೀ ನಿದ್ರಿಸುತ್ತಿರುವ ಮಗು ಗಮನಕ್ಕೆ ಬಾರದೇ ಇರುವುದು ನಿಜಕ್ಕೂ ವಿಪರ್ಯಾಸ.

ಜಿಯಾನ್ ಚುಂಗಿ (4) ರಕ್ಷಿಸಲಾದ ಮಗುವಾಗಿದ್ದು,  ಈತನ ಕುಟುಂಬ ಮತ್ತು ಬಂಧುಗಳು ಒಟ್ಟಾಗಿ ಇಸ್ಕಾನ್ ದೇವಸ್ಥಾನಕ್ಕೆ ತೆರಳಿದ್ದರು. ದೇಗುಲದಿಂದ ಮರಳಿ ಬರುವ ವೇಳೆ ಜಿಯಾನ್ ಚುಂಗಿ ಕ್ಯಾಬ್​​ನ ಹಿಂಬದಿಯ ಆಸನದಲ್ಲಿ ನಿದ್ರೆಗೆ ಜಾರಿದ್ದು, ಅಪಾರ್ಟ್‌ಮೆಂಟ್‌ಗೆ ತಲುಪಿದ ಬಳಿಕ ಕುಟುಂಬಸ್ಥರು ತ್ವರಿತವಾಗಿ ವಾಹನದಿಂದ ಇಳಿದು ಮನೆಗೆ ತೆರಳಿದ್ದಾರೆ. ನಿದ್ರಿಸುತ್ತಿದ್ದ ಬಾಲಕನ ಬಗ್ಗೆ ಒಬ್ಬರಿಗೂ ಗಮನ ಇರಲಿಲ್ಲ. ಇತ್ತ ಕ್ಯಾಬ್​​ ಚಾಲಕನೂ ಬಾಲಕನ ಗಮನಿಸದೆ ಮುಂದಿನ ಟ್ರಿಪ್​​ಗೆಂದು ತೆರಳಿದ್ದ ಎನ್ನಲಾಗಿದೆ.

ಮನೆ ತಲುಪುತ್ತಿದ್ದಂತೆ ಕುಟುಂಬಸ್ಥರಿಗೆ ಮಗು ನಾಪತ್ತೆ ಆಗಿರುವ ವಿಚಾರ ಗೊತ್ತಾಗಿದೆ. ಈ ವೇಳೆ ಆತ ಕ್ಯಾಬ್​​ನಲ್ಲಿ ನಿದ್ರಿಸುತ್ತಿದ್ದ ಎಂಬುದು ನೆನಪಾಗಿ ಕಾಲ್ ಸೆಂಟರ್ ಮೂಲಕ ಕ್ಯಾಬ್ ಸಂಪರ್ಕಿಸಲು ಪ್ರಯತ್ನ ನಡೆಸಿದ್ದಾರೆ. ಆದರೆ ಅದು ವಿಫಲವಾದ ಕಾರಣ ರಾಜ್ಯದ ತುರ್ತು ಪ್ರತಿಕ್ರಿಯಾ ವ್ಯವಸ್ಥೆಯಾದ ‘ನಮ್ಮ 112’ಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸಿಬ್ಬಂದಿ ತಕ್ಷಣವೇ ಹೋಯ್ಸಳ-51 ಪೇಟ್ರೋಲಿಂಗ್‌ನಲ್ಲಿ ಸಮೀಪದಲ್ಲಿದ್ದ ಎಎಸ್‌ಐ ಮಂಜಪ್ಪ ಕೊಪ್ಪಳ ಹಾಗೂ ಮುಖ್ಯ ಆರಕ್ಷಕ ಸತೀಶ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದು, ಅವರು ಎರಡು ನಿಮಿಷಗಳಲ್ಲೇ ಅಪಾರ್ಟ್‌ಮೆಂಟ್‌ ತಲುಪಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕ್ಯಾಬ್ ನೋಂದಣಿ ಸಂಖ್ಯೆ ಆಧಾರದಲ್ಲಿ ಮೊಬೈಲ್ ಕ್ರೈಂ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ಸಿಸ್ಟಮ್ (CCTNS) ಆಪ್ ಬಳಸಿ ಚಾಲಕನನ್ನು ಸಂಪರ್ಕಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *