ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸಿಗೆ ಮತ್ತೊಂದು ಶಾಕ್.

ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸಿಗೆ ಮತ್ತೊಂದು ಶಾಕ್.

ಅಖಾಡಕ್ಕಿಳಿದ ಮತ್ತೋರ್ವ ಪ್ರಭಾವಿ ಮುಸ್ಲಿಂ ನಾಯಕ.

ದಾವಣಗೆರೆ: ದಾವಣಗೆರೆ ಬೆಣ್ಣೆ ದೋಸೆಯಂತೆ ಸಲೀಸಾಗಿ ಉಪಚುನಾವಣೆ ಗೆದ್ದು ಬೀಗಲು ಮುಂದಾಗಿದ್ದ ಕಾಂಗ್ರೆಸ್​ಗೆ ದಾವಣಗೆರೆ ದಕ್ಷಿಣ ಕ್ಷೇತ್ರ ಬಿಸಿತುಪ್ಪವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರ್​ ಗೆ ಮುಸ್ಲಿಂ ಮತಗಳು ಕೈತಪ್ಪುವ ಆತಂಕ ಶುರುವಾಗಿದೆ. ಯಾಕಂದ್ರೆ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರೋ ಸಾದಿಕ್ ಪೈಲ್ವಾನ್, ನಾಮಪತ್ರ ವಾಪಸ್ ಪಡೆಯದೆ, ತಮ್ಮ ಸ್ಪರ್ಧೆಯ ನಿಲುವು ಅಚಲ ಎಂದು ಸಂದೇಶ ಸಾರಿದ್ದಾರೆ. ಅಲ್ಲದೇ ಪೈಲ್ವಾನ್ ಸೇರಿದಂತೆ ಬರೋಬ್ಬರಿ 14 ಮುಸ್ಲಿಂ ಅಭ್ಯರ್ಥಿಗಳು ದಾವಣಗೆರೆ ದಕ್ಷಿಣ ಕಣದಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್​​ಗೆ ಆತಂಕವಾಗಿರುವುದು ಸಾಮಾನ್ಯ. ನಿನ್ನೆ (ಮಾರ್ಚ್ 26) ಕಾಂಗ್ರೆಸ್​ನ ನಾಯಕರು ಖುದ್ದು ಸಾದಿಕ್ ಮನೆಗೆ ಬಂದು ಸಂಧಾನಕ್ಕೆ ಯತ್ನಿಸಿದ್ದಾರೆ. ಈ ವೇಳೆ ಸಾದಿಕ್ ಬೆಂಬಲಿಗರು ಗೋ ಬ್ಯಾಕ್ ಘೋಷಣೆ ಕೂಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮುಸ್ಲಿಂ ಸಮುದಾಯ ರಾಜ್ಯ ನಾಯಕ ಸಿಎಂ ಇಬ್ರಾಹಿಂ ಸಹ ದಾಣಗೆರೆ ಅಖಾಡಕ್ಕಿಳಿಯಲಿದ್ದು, ಪಕ್ಷೇತರ ಅಭ್ಯರ್ಥಿ ಅಭ್ಯರ್ಥಿ ಖಾಲಿದ್ ಆದಿಲ್ ಪಾಷಾ ಪರ ಪ್ರಚಾರ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದರಿಂದ ಕಾಂಗ್ರೆಸ್​​ಗೆ ಮತ್ತಷ್ಟು ಆತಂಕ ಎದುರಾಗಿದೆ.

ಯಾಕಂದ್ರೆ, ಸಿಎಂ ಇಬ್ರಾಹಿಂದ ಸಹ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರು, ಜಮೀರ್ ಅಹಮ್ಮದ್ ಖಾನ್ ಹೇಗೋ ಹಾಗೇ ಇಬ್ರಾಹಿಂ ಸಹ ತಮ್ಮ ಸಮುದಾಯದಲ್ಲಿ ಹಿಡಿತ ಹೊಂದಿದ್ದಾರೆ. ಹೀಗಾಗಿ ಇಬ್ರಾಹಿಂ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ಮಾಡಿ ಗೆಲ್ಲಿಸುವ ಶಕ್ತಿ ಇಲ್ಲವಾದರೂ ಮುಸ್ಲಿಂ ಮತಗಳನ್ನ ಸೆಳೆದ ಕಾಂಗ್ರೆಸ್ ಸೋಲಿಗೆ ಕಾರಣವಾಗಬಹುದು. ಹೀಗಾಗಿ ಸಿಎಂ ಇಬ್ರಾಹಿಂದ ನಡೆ ತೀವ್ರ ಕುತೂಹಲ ಮೂಡಿಸಿದೆ.​​​​

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *