ಕಬ್ಬು ದರ ನಿಗದಿಗೆ ರೈತರ ಕೂಗಿಗೆ ಸ್ಪಂದಿಸದ ಬೆಳಗಾವಿ ನಾಯಕರು.!

ಕಬ್ಬು ದರ ನಿಗದಿಗೆ ರೈತರ ಕೂಗಿಗೆ ಸ್ಪಂದಿಸದ ಬೆಳಗಾವಿ ನಾಯಕರು.!

ಬೆಳಗಾವಿ: ಕಬ್ಬಿಗೆ ದರ ನಿಗದಿಗೆ ಆಗ್ರಹಿಸಿ ಕಳೆದ 8 ದಿನಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್​ನಲ್ಲಿ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಜಿಲ್ಲಾ ನಾಯಕರು ಮಾತ್ರ ಫುಲ್​ ಸೈಲೆಂಟ್ ಆಗಿದ್ದಾರೆ. ವಿಪಕ್ಷ, ಆಡಳಿತ ಪಕ್ಷದ ಜನಪ್ರತಿನಿಧಿಗಳು ಜಿಲ್ಲೆಯಲ್ಲಿಯೇ ಇದ್ದರೂ ಕಂಡೂ ಕಾಣದಂತೆ ಓಡಾಡಿಕೊಂಡಿದ್ದಾರೆ.

ಎರಡೆರಡು ಸಕ್ಕರೆ ಕಾರ್ಖಾನೆ ಹೊಂದಿರುವ ಸಚಿವ ಸತೀಶ್ ಗಪ್​ಚುಪ್ ಆಗಿದ್ದರೆ ಇತ್ತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಸಹ ಸೈಲೆಂಟ್ ಮೂಡ್​ಗೆ ಜಾರಿದ್ದಾರೆ. ಲಕ್ಷ್ಮಣ ಸವದಿ, ರಮೇಶ್​ ಕತ್ತಿ, ಪ್ರಭಾಕರ್​ ಕೋರೆ, ಜಾರಕಿಹೊಳಿ ಬ್ರದರ್ಸ್​, ಜೊಲ್ಲೆ ಸೇರಿ ಘಟಾನುಘಟಿ ನಾಯಕರೆಲ್ಲ ಮೌನವಾಗಿರೋದು ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ನಡೆಯುವ ಸಣ್ಣ ಬ್ಯಾಂಕ್ ಚುನಾವಣೆಗೆ ಒಂದಾಗುವ ನಾಯಕರು, ರೈತರ ವಿಚಾರದಲ್ಲಿ ಡೋಂಟ್​ಕೇರ್ ಮನಸ್ಥಿತಿ ಹೊಂದಿದ್ದಾರೆ ಎಂದು ಅನ್ನದಾತರು ಕಿಡಿ ಕಾರಿದ್ದಾರೆ.

ಬೆಳಗಾವಿಯಲ್ಲಿ ಗೌಪ್ಯ ಸಭೆ ನಡೆಸಿದ ಸಕ್ಕರೆ ಸಚಿವರು

ಕಬ್ಬು ಬೆಳೆಗಾರರ ಹೋರಾಟದಿಂದ ಕೊನೆಗೂ ಎಚ್ಚೆತ್ತ ಸಕ್ಕರೆ ಸಚಿವ ಶಿವಾನಂದ ಪಾಟೀಲ್​, ಹುಬ್ಬಳ್ಳಿಯಿಂದ ಬೆಳಗಾವಿಗೆ ಆಗಮಿಸಿದ್ದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಜೊತೆ ದಿಢೀರ್ ಸಭೆ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ನಿರ್ದೇಶನದಂತೆ ಬೆಳಗಾವಿಯ ಖಾಸಗಿ ಹೋಟೆಲ್​ನಲ್ಲಿ ಗೌಪ್ಯ ಮೀಟಿಂಗ್​ ನಡೆಸಿದ್ದಾರೆ. ಸಭೆ ಬಳಿಕ ಈ ಬಗ್ಗೆ ಸಿಎಂಗೆ ಕರೆ ಮಾಡಿರುವ ಸಚಿವರು, ಸಕ್ಕರೆ ಕಾರ್ಖಾನೆಯವರು ಹೆಚ್ಚುವರಿ ಹಣ ಕೊಡಲು ಒಪ್ಪುತ್ತಿಲ್ಲ. ಈಗ ಕೊಡುತ್ತಿರೋದೇ ಹೆಚ್ಚು ಅಂತಾ ಹೇಳ್ತಿದ್ದಾರೆ ಎಂದು  ತಿಳಿಸಿದ್ದಾರೆ. ಈ ವೇಳೆ ಸಚಿವರ ಮಾತಿಗೆ ಸಿಎಂ ಗರಂ ಆಗಿದ್ದು, ರೈತರನ್ನ ಮನವೊಲಿಸಿ ಸರಿಮಾಡಿ ಬರಲು ಸೂಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ರೈತರ ಆಕ್ರೋಶ ಭುಗಿಲೇಳುವ ಸಾಧ್ಯತೆ ಹಿನ್ನಲೆ ಪ್ರತಿಭಟನಾ ಸ್ಥಳಕ್ಕೆ ತೆರಳದೇ ಇರಲು ಶಿವಾನಂದ ಪಾಟೀಲ್​ ಅವರಿಗೆ ಸಿಎಂ ಸಲಹೆ ನೀಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *