ಅಕ್ರಮ ಆಸ್ತಿ ಹಾಗೂ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳಲ್ಲಿ ತನ್ನನ್ನು ಗುರಿಯಾಗಿಸಿಕೊಂಡಿದ್ದ ಸಿಬಿಐ ಈಗ ಅವರ ಕುಟುಂಬದ ಸದಸ್ಯರ ಮೇಲೆಯೇ ಟಾರ್ಗೆಟ್ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
![](http://pragatitv.in/wp-content/uploads/2022/09/JEENI_ADD_WEB-1024x576.jpg)
ಭದ್ರಾವತಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನನ್ನ ಮಗಳು ವಿದ್ಯಾರ್ಥಿನಿಯಾಗಿದ್ದಾಗ ಕಾಲೇಜಿಗೆ ಪಾವತಿಸಿದ ಶುಲ್ಕ, ಎಷ್ಟು ವಿಷಯಗಳಲ್ಲಿ ಉತ್ತೀರ್ಣಳಾಗಿದ್ದಾಳೆ ಎಂಬ ವಿವರ ನೀಡುವಂತೆ ನೋಟಿಸ್ ಬಂದಿದೆ. ಈ ಸರ್ಕಾರಿ ಸಂಸ್ಥೆಗಳು ನನ್ನ ಕುಟುಂಬವನ್ನು ಹೇಗೆ ನಡೆಸಿಕೊಳ್ಳುತ್ತಿವೆ ಎಂದು ನೀವು ಊಹಿಸಿಕೊಳ್ಳಿ,” ಎಂದು ಹೇಳಿದರು.
ಇತ್ತೀಚೆಗೆ ಜಾರಿ ನಿರ್ದೇಶನಾಲಯ ನಡೆಸಿದ ವಿಚಾರಣೆಗೆ ಹಾಜರಾಗಿದ್ದು, ಫೆಬ್ರವರಿ 27ರಂದು ಮತ್ತೊಮ್ಮೆ ತನಿಖೆಗೆ ಹಾಜರಾಗಬೇಕಿದೆ ಎಂದು ಡಿಕೆಶಿ ಹೇಳಿದರು. “ಇಂತಹ ಪರಿಸ್ಥಿತಿ ಇರುವಾಗ ನಾನು ತನಿಖೆಯನ್ನು ಎದುರಿಸಬೇಕೋ ಅಥವಾ ಪ್ರಜಾಧ್ವನಿ ಯಾತ್ರೆಗೆ ಹಾಜರಾಗಬೇಕೋ ಗೊತ್ತಿಲ್ಲ” ಎಂದರು.
Pragati TV Social Connect for more latest u