ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಪರೇಡ್ ವೀಕ್ಷಣಾ ಜೀಪ್ನಲ್ಲಿ ಡೀಸೆಲ್ ಸೋರಿಕೆ: ದೊಡ್ಡ ಅನಾಹುತ ತಪ್ಪಿತು.

ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಪರೇಡ್ ವೀಕ್ಷಣಾ ಜೀಪ್ನಲ್ಲಿ ಡೀಸೆಲ್ ಸೋರಿಕೆ: ದೊಡ್ಡ ಅನಾಹುತ ತಪ್ಪಿತು.

ಬೆಳಗಾವಿ: ಕನ್ನಡ ರಾಜ್ಯೋತ್ಸವದ ಸಂಭ್ರಮದ ಸಂದರ್ಭದಲ್ಲಿ ಕುಂದಾನಗರಿ ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾರಿ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ. ರಾಜ್ಯೋತ್ಸವ ಪರೇಡ್ ವೀಕ್ಷಣೆಗೆ ತೆರಳುವ ಸಚಿವ ಸತೀಶ್‌ ಅವರ ಜೀಪ್‌ನಿಂದ ಅಕಸ್ಮಾತ್‌ ಡೀಸೆಲ್‌ ಸೋರಿಕೆಯಾಗಿದೆ. ಧ್ವಜಾರೋಹಣ ಕಾರ್ಯಕ್ರಮದ ಬಳಿಕ ಪರೇಡ್ ವೀಕ್ಷಣೆಗೆ ತೆರಳಲು ಸಚಿವರು ಸಿದ್ಧರಾಗಿದ್ದ ವೇಳೆ ಜೀಪ್‌ ಕೆಳಭಾಗದಲ್ಲಿ ಡೀಸೆಲ್‌ ಸೋರಿಕೆಯಾದ್ದು ಗಮನಕ್ಕೆ ಬಂದಿದೆ.

 ಬೆಂಕಿ ಹೊತ್ತಿಕೊಳ್ಳದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಫೈರ್ ಕಂಟ್ರೋಲ್ ಗ್ಯಾಸ್‌ ಸಿಂಪಡಣೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಬಳಿಕ ಪೊಲೀಸರು ಜೀಪ್‌ನ್ನು ಮೈದಾನದಿಂದ ಹೊರತೆಗೆದುಕೊಂಡು ಹೋದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *