ಖ್ಯಾತ ಸಂಗೀತ ನಿರ್ದೇಶಕರಿಂದ ಈ ಬಾರಿ ದಸರಾ ಉದ್ಘಾಟನೆ..!!

ಮೈಸೂರು: ಈ ಬಾರಿಯ ದಸರಾ ಉದ್ಘಾಟನೆಗೆ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಆಯ್ಕೆ ಮಾಡಲಾಗಿದೆ. ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಿ ಮಂಗಳವಾರ ಪೂಜೆ ಸಲ್ಲಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಈ ವಿಷಯವನ್ನು ಪ್ರಕಟಿಸಿದ್ದಾರೆ.

ನಿರ್ದೇಶಕ

ಈ ಬಾರಿಯ ಮೈಸೂರು ದಸರಾವನ್ನು ಸಂಗೀತ ನಿರ್ದೇಶಕರಾಗಿರುವ ಹಂಸಲೇಖ ಅವರಿಂದ ಉದ್ಘಾಟನೆ ಮಾಡಿಸುವ ಕುರಿತು ತೀರ್ಮಾನಿಸಲಾಗಿದೆ ಎಂದು ಸಿದ್ದರಾಮಯ್ಯ ಖಚಿತಪಡಿಸಿದರು. ಅಕ್ಟೋಬರ್ 15 ರಂದು ಹಂಸಲೇಖ ಅವರು ಈ ಬಾರಿಯ ದಸರಾವನ್ನು ಉದ್ಘಾಟಿಸಲಿದ್ದಾರೆ.

ಹಿಂದೆಯೂ ಗಿರೀಶ್ ಕಾರಂತ್, ಬರಗೂರು ರಾಮಚಂದ್ರಪ್ಪ ಅವರು ಸೇರಿದಂತೆ ಹಲವರು ಚಿಂತಕರು ದಸರಾ ಉದ್ಘಾಟಿಸಿದ ಉದಾಹರಣೆಯಿದೆ. ಸಾಹಿತಿಗಳು, ಧರ್ಮಗುರುಗಳೂ ಕೂಡ ದಸರಾವನ್ನು ಹಲವು ಬಾರಿ ಉದ್ಘಾಟಿಸಿದ್ದಾರೆ. ಈ ಬಾರಿ ಹಂಸಲೇಖ ಅವರಿಗೆ ಈ ಬಾರಿ ಅವಕಾಶ ದೊರೆತಿದೆ.

Facebook: https://www.facebook.com/PragathiTV/

Pragati TV Social Connect for more latest u

Leave a Reply

Your email address will not be published. Required fields are marked *