ಚಿಕ್ಕಬಳ್ಳಾಪುರ: ಪವನ್ ಕಲ್ಯಾಣ್ ಅಭಿಮಾನಿಗಳು OG ಚಿತ್ರ ಪ್ರದರ್ಶನ ವಿಳಂಬವಾದ ಹಿನ್ನೆಲೆಯಲ್ಲಿ ಚಿಂತಾಮಣಿಯ ಆದರ್ಶ ಚಿತ್ರಮಂದಿರದಲ್ಲಿ ಭಾರೀ ಹಂಗಾಮಾ ಎಬ್ಬಿಸಿದ್ದಾರೆ. ಅನಿಲದಂತೆ Movie ಕ್ರೇಜ್ ಹರಡುತ್ತಿದ್ದ OG ಚಿತ್ರ, ಸಮಯಕ್ಕೆ ಪ್ರದರ್ಶನವಾಗದ ಹಿನ್ನೆಲೆಯಲ್ಲಿ ಚಿತ್ರಮಂದಿರವೇ ಗಲಾಟೆಯ ಕೇಂದ್ರವಾಗಿ ಪರಿವರ್ತಿತವಾಯಿತು.
ಹಣ ಪಾವತಿಸಿ ಸಿನಿಮಾ ಮಾತ್ರ ಸಿಕ್ಕಿಲ್ಲ! ಅಭಿಮಾನಿಗಳ ಕಿಡಿಗೇಡಿತನ
ಸೆಪ್ಟೆಂಬರ್ 24ರ ರಾತ್ರಿ 8ಕ್ಕೆ ಫ್ಯಾನ್ಸ್ ಶೋ ಎಂದು ಘೋಷಣೆ ನೀಡಲಾಗಿತ್ತು. ಆದರೆ ರಾತ್ರಿ 9ರವರೆಗೂ ಸಿನಿಮಾ ಪ್ರಾರಂಭವಾಗದೆ, ಟಿಕೆಟ್ ಕೊಂಡ ಅಭಿಮಾನಿಗಳು ಆಕ್ರೋಶದಿಂದ ಚಿತ್ರಮಂದಿರದಲ್ಲಿ ಪರದೆಯನ್ನೇ ಹರಿದು ಹಾಕಿದರು, ಕುರ್ಚಿಗಳನ್ನು ಒಡೆದು ಹಾಕಿ, ಸಿಸಿಟಿವಿ ಕ್ಯಾಮೆರಾಗಳವರೆಗೂ ಧ್ವಂಸಗೊಳಿಸಿದರು.
ಪೊಲೀಸರು ಸ್ಥಳಕ್ಕೆ ಧಾವನೆ – ಪರಿಸ್ಥಿತಿ ನಿಯಂತ್ರಣದಲ್ಲಿ
ಗಲಾಟೆಯ ಮಾಹಿತಿ ತಿಳಿಯುತ್ತಿದ್ದಂತೆ ಚಿಂತಾಮಣಿ ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವಿಜಯಕುಮಾರ್ ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿ, ಅಭಿಮಾನಿಗಳನ್ನು ತೆರವುಗೊಳಿಸಿದರು. ಮಧ್ಯರಾತ್ರಿ 12ರ ಸುಮಾರಿಗೆ ಚಿತ್ರಮಂದಿರದ ಮಾಲೀಕರೊಂದಿಗೆ ಪೊಲೀಸ್ ಇಲಾಖೆ ಮಾತುಕತೆ ನಡೆಸಿ, ಶಾಂತಿಯುತ ಪರಿಹಾರ ಕಂಡುಹಿಡಿಯಿತು.
- ಶೋ ನೋಡಲು ಇಚ್ಛೆಯಿರುವವರಿಗೆ ಮರು ಟಿಕೆಟ್ ನೀಡಲು,
- ನೋಡಲು ಬಯಸದವರಿಗೆ ಹಣ ಹಿಂತಿರುಗಿಸಲು ನಿಗದಿತ ಕ್ರಮ ಕೈಗೊಳ್ಳಲಾಯಿತು.
‘ತಲ್ವಾರ್ ಸ್ಟೈಲ್‘ ಹಂಗಾಮೆ ಬೆಂಗಳೂರಲ್ಲೂ!
OG ಚಿತ್ರದಲ್ಲಿ ಪವನ್ ಕಲ್ಯಾಣ್ ತಲ್ವಾರ್ ಹಿಡಿದಿರುವ ದೃಶ್ಯಗಳು ಫ್ಯಾನ್ಸ್ ಮೇಲೆ ಪ್ರಭಾವ ಬೀರಿ, ಬೆಂಗಳೂರು ಮಡಿವಾಳದ ಥಿಯೇಟರ್ ಬಳಿ ಪ್ಲಾಸ್ಟಿಕ್ ತಲ್ವಾರ್ ಹಿಡಿದು ನೃತ್ಯ ಮಾಡಿದ ಪ್ರಕರಣವೂ ನಡೆದಿದೆ. ಜಯನಗರದಲ್ಲಿ ಕಟೌಟ್ ಮುಂದೆ ಫೋಟೋ ಕ್ಲಿಕ್ ಮಾಡಿಕೊಳ್ಳಲು ಪುಂಡರು ₹200ಗೆ ತಲ್ವಾರ್ ಬಾಡಿಗೆಗೆ ತಂದಿದ್ದಾರೆ ಎಂಬ ವರದಿಯೂ ಇದೆ.
- ಸದ್ಯ ಮಡಿವಾಳ ಪೊಲೀಸರು ತಲ್ವಾರ್ಗಳನ್ನು ವಶಕ್ಕೆ ಪಡೆದು ಕ್ರಮ ಕೈಗೊಂಡಿದ್ದಾರೆ.
For More Updates Join our WhatsApp Group :
