ಪಂಜಾಬ್: ಭಾರೀ ಮಳೆಯಿಂದಾಗಿ ದೆಹಲಿ, ಎನ್ಸಿಆರ್ ಹಾಗೂ ಪಂಜಾಬ್ನಲ್ಲಿ ಪ್ರವಾಹ ಉಂಟಾಗಿ ಹಲವರು ನಿರಾಶ್ರಿತರಾಗಿದ್ದಾರೆ. ತಾತ್ಕಾಲಿಕ ಶಿಬಿರಗಳಲ್ಲಿ ವಾಸಿಸುತ್ತಿರುವ ಇವರಿಗೆ ಉಚಿತವಾಗಿ ಆಹಾರ ವಿತರಣೆ ನಡೆಯುತ್ತಿದೆ.ಆದರೆ, ಇದೇ ಸಂದರ್ಭದಲ್ಲಿ ಒಬ್ಬ ಸ್ವಾಭಿಮಾನಿ ಬಾಲಕ ಮಾಡಿದ ನಡೆ ಮನಸೂರೆಗೊಂಡಿದೆ.
ಬಾಲಕನ ವಿಶೇಷ ನಡೆ: ಶಿಬಿರದಲ್ಲಿ ಉಚಿತ ಊಟ ವಿತರಣೆ ನಡೆಯುತ್ತಿತ್ತು.ಆದರೆ ಬಾಲಕ ತನ್ನ ಬಳಿ ಇದ್ದಷ್ಟು ಹಣವನ್ನು ಕೊಟ್ಟು ನಂತರವೇ ಊಟವನ್ನು ಪಡೆದನು.ಎಂಥಾ ಸಂಕಷ್ಟದಲ್ಲಿದ್ದರೂ “ಬೇರೆಯವರ ಬಳಿ ಕೈಚಾಚುವುದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ., ಬಾಲಕನ ಆತ್ಮಗೌರವಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
For More Updates Join our WhatsApp Group :