ರಾಜಕಾರಣಿಗಳ ಪೋಟೋ ಹಿಡಿದು ಗೆಲುವಿಗೆ ಅಯ್ಯಪ್ಪನಲ್ಲಿ ಹರಕೆ

ಶಬರಿಮಲೈಯಲ್ಲಿ ರಾಜಕಾರಣಿಗಳ ಪೋಟೋ ಯಾತ್ರೆ

ನೆಚ್ಚಿನ ನಾಯಕನ ಗೆಲುವಿಗೆ ಮಾಲಾಧಾರಿಗಳಿಂದ ಪೋಟೋ ಯಾತ್ರೆ

-ಕೆ.ಆರ್.ಬಾಬು

ಜನವರಿ ತಿಂಗಳು ಬಂದರೆ ಹಿಂದೂಗಳ ಪವಿತ್ರ ಪುಣ್ಯ ಕ್ಷೇತ್ರ ಶಬರಿಮಲೆಗೆ ಮಾಲಾಧಾರಿಗಳಿಂದ ತುಂಬಿಹೋಗುತ್ತೆ. ರಾಜ್ಯದಿಂದ ಮಾತ್ರವಲ್ಲ ದೇಶಾದ್ಯಂತ ಮಣಿಕಂಠನ ಭಕ್ತರು ನಿಷ್ಠೆಯಿಂದ ವ್ರತಮಾಡುತ್ತಾ,  ಮಾಧಾರಿಗಳಾಗಿ ಬಂದು ಪಂಪಾನದಿಯಲ್ಲಿ ಮಿಂದು ಅಯ್ಯಪ್ಪನ ದರ್ಶನ ಪಡೆದು ಪುನೀತರಾಗುತ್ತಾರೆ.  ಈ ಬಾರಿ ಶಬರಿಮಲೆಗೆ ತರಳುವ ಭಕ್ತರಲ್ಲಿ ಹೊಸ ಟ್ರೆಂಡ್ ವೊಂದು ಶುರುವಾಗಿದೆ.  ಅಯ್ಯಪ್ಪ ಸ್ವಾಮಿ ಭಕ್ತರು ಮಾಲಾಧಾರಿಗಳಾಗಿ ಯಾತ್ರೆ ಮಾಡುವಾಗ  ಇರುಮುಡಿ ಜೊತೆಗೆ ತಮ್ಮ ನೆಚ್ಚಿನ ರಾಜಕೀಯ ನಾಯಕರ ಫೋಟೊ ಹಿಡಿದು ತೆರಳುತ್ತಿದ್ದಾರೆ. ತಮ್ಮ ತಮ್ಮ‌ ಕ್ಷೇತ್ರದ ನಾಯಕರ ಫೋಟೋ ಹಿಡಿದು ಶಬರಿಮಲೈಗೆ ತೆರಳಿದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು, ತಮ್ಮ ನಾಯಕರು 2023ರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲಿ ಎಂದು ಫೋಟೋ ಹಿಡಿದು ಹರಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ಮು ಶ್ರೀ ಕ್ಷೇತ್ರ ಶಬರಿ ಮಲೆಗೆ ತುಮಕೂರು ಜಿಲ್ಲೆಯಿಂದ ಹೊರಟ ಮಾಲಾಧಾರಿಗಳು ಸಹ  ಫೋಟೋಗಳನ್ನು ಹಿಡಿದು ಹೋಗುತ್ತಿದ್ದಾರೆ.ಅದರಲ್ಲು ಮುಖ್ಯವಾಗಿ ಸಚಿವ ಮಾಧುಸ್ವಾಮಿ, ಮಾಜಿ ಶಾಸಕ ಕೆ.ಎನ್ ರಾಜಣ್ಣ,  ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್, ಚಿಕ್ಕನಾಯಕನಹಳ್ಳಿ ಮಾಜಿ‌ ಶಾಸಕ ಸುರೇಶ್ ಬಾಬು ಬೆಂಬಲಿಗರು ತಮ್ಮ ನೆಚ್ಚಿನ ನಾಯಕನ ಗೆಲುವಿಗೆ ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತು ಶಬರಿ ಮಲೈಗೆ ತೆರಳುತ್ತಿದ್ದಾರೆ.  ಇನ್ನು ಇದಲ್ಲದೇ ಪ್ರತಿ ವರ್ಷದಂತೆ ಈ ಬಾರಿಯೂ ಚಿಕ್ಕನಾಯಕನಹಳ್ಳಿ ಜೆಡಿಎಸ್ ಮಾಜಿ ಶಾಸಕ ಸುರೇಶ್ ಬಾಬು  ಮಾಲಾಧಾರಿಯಾಗಿ  ಶಬರಿ ಮಲೈಗೆ ತೆರಳಿ  ಸ್ವಾಮಿ ಅಯ್ಯಪ್ಪನ ದರ್ಶನ  ಮಾಡಿ ಬಂದಿದ್ದಾರೆ. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಅಯ್ಯಪ್ಪನ ಆಶಿರ್ವಾದ ಯಾರ ಮೇಲೆ ಅನ್ನೋದು ಕಾದು ನೋಡ ಬೇಕಿದೆ.

Pragati TV Social Connect for more latest u

Leave a Reply

Your email address will not be published. Required fields are marked *