ನಾನು ಆರಾಮಗಿ ಇದ್ದೇನೆ ಕ್ಷೇತ್ರದ ಜನರು ಭಯಪಡುವ ಅವಶ್ಯಕತೆ ಇಲ್ಲ:  ಶಿವರಾಜ್ ತಂಗಡಗಿ

ನಾನು ಆರಾಮಗಿ ಇದ್ದೇನೆ ಕ್ಷೇತ್ರದ ಜನರು ಭಯಪಡುವ ಅವಶ್ಯಕತೆ ಇಲ್ಲ:  ಶಿವರಾಜ್ ತಂಗಡಗಿ

ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯೆ

ತುಮಕೂರು: ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಸಿದ್ದಗಂಗಾ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡು, ಆರೋಗ್ಯ ಸ್ಥಿತಿ ಸುಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

ಅವರು ಕುಟುಂಬ ವೈದ್ಯರ ಸಲಹೆ ಮೇರೆಗೆ ಸಿದ್ಧಗಂಗಾ ಆಸ್ಪತ್ರೆಗೆ ಭೇಟಿ ನೀಡಿದರು. ಡಾ. ಶರತ್ ಅವರಿಂದ ತಪಾಸಣೆ ನಡೆಯಿತು, ಇಸಿಜಿ ಮತ್ತು ಇಕೋ ಪರೀಕ್ಷೆಗಳನ್ನು ಮಾಡಲಾಗಿದ್ದು ಯಾವುದೇ ತೊಂದರೆ ಕಾಣಿಸಲಿಲ್ಲ. ವೈದ್ಯರು ಸ್ಥಿತಿ ಸುಸ್ಥಿರವಾಗಿದೆ ಎಂದ ನಂತರ ಸಚಿವರು ಆಸ್ಪತ್ರೆ ತೊರೆದರು.

 “ನನಗೆ ನೋವು ಆಗಿತ್ತು, ಸ್ವಲ್ಪ ಗಾಬರಿ ಆಯ್ತು, ಆದ್ರೆ ಈಗ ಎಲ್ಲವೂ ನರ್ಮಲ್ ಇದೆ. ಕ್ಷೇತ್ರದ ಜನರು ಭಯಪಡುವ ಅವಶ್ಯಕತೆ ಇಲ್ಲ.” ಬೆಳಿಗ್ಗೆಯಿಂದ ಸಂಜೆ ವರೆಗೂ ಕ್ಷೇತ್ರದಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಲೇಟ್ ಊಟದ ಕಾರಣ ಅಸಿಡಿಟಿ ಸಮಸ್ಯೆ ಉಂಟಾಗಿ, ತಕ್ಷಣ ಟ್ಯಾಬ್ಲೆಟ್ ತೆಗೆದುಕೊಂಡು ಪರಿಹರಿಸಿದ್ದರು. ವೈದ್ಯರ ಸಲಹೆಯಂತೆ ಅವರು ಬಳಿಕ ಬೆಂಗಳೂರಿಗೆ ಪ್ರಯಾಣಿಸಿದ್ದರು.

ಸಚಿವರು ನಿರ್ವಹಣೆ ಫಲಿತಾಂಶದಲ್ಲಿ ಸಂಪೂರ್ಣ ಆರಾಮದಲ್ಲಿ ಇದ್ದಾರೆ ಮತ್ತು ಯಾವುದೇ ತೀವ್ರ ಸಮಸ್ಯೆ ಇಲ್ಲ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *