ಸೋನು ಶೆಟ್ಟಿ ಸದ್ಯ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅವರು ‘ದರ್ಶನ್ ರೌಡಿ ಆಗಿರಬೇಕಿತ್ತು, ತಪ್ಪಾಗಿ ಹೀರೋ ಆಗಿದ್ದಾರೆ’ ಎಂದು ವಿವಾದ ಮಾಡಿಕೊಂಡಿದ್ದರು. ಆ ಬಳಿಕ ದರ್ಶನ್ ಫ್ಯಾನ್ಸ್ ಸೋನು ಶೆಟ್ಟಿ ಅವರ ಸೋಶಿಯಲ್ ಮೀಡಿಯಾ ಖಾತೆಗೆ ಕೆಟ್ಟದಾಗಿ ಕಮೆಂಟ್ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಸೋನು ಶೆಟ್ಟಿ ಅವರು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.
‘ನನಗೂ ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದ. ಆತನನ್ನು ನಾನು ಬ್ಲಾಕ್ ಮಾಡಿದ್ದೆ. ಆ ವೇಳೆ ನಾನು ದರ್ಶನ್ ಪರವೇ ಮಾತನಾಡಿದ್ದೆ. ನಾನು ಸುದೀಪ್ ಅಭಿಮಾನಿ ಅನ್ನೋ ಕಾರಣಕ್ಕೆ ನನ್ನ ಟಾರ್ಗೆಟ್ ಮಾಡುತ್ತಿದ್ದಿರಬಹುದು’ ಎಂದು ಸೋನು ಹೇಳಿದ್ದಾರೆ.
For More Updates Join our WhatsApp Group :