“ಸೋಲು–ಹತಾಶೆ ಪ್ರದರ್ಶನ ವೇದಿಕೆ ಆಗಬಾರದು” — ಪ್ರಧಾನಿ ಮೋದಿ.

 “ಸೋಲು–ಹತಾಶೆ ಪ್ರದರ್ಶನ ವೇದಿಕೆ ಆಗಬಾರದು” — ಪ್ರಧಾನಿ ಮೋದಿ.

ನವದೆಹಲಿ : ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಬಿಹಾರ ಚುನಾವಣೆಯಲ್ಲಿನ ಸೋಲನ್ನು ಕೆಲವು ಪಕ್ಷಗಳಿಗೆ ಅರಗಿಸಿಕೊಳ್ಳಲು ಸಾಧ್ಯವಿಲ್ಲ, ಚಳಿಗಾಲದ ಅಧಿವೇಶನ ಸೋಲಿನ ಹತಾಶೆಯ ಅಭಿವ್ಯಕ್ತಿ ತಾಣವಾಗಿ ಬದಲಾಗಬಾರದು ಎಂದರು.

ಗೆಲುವಿನ ಮೇಲಿನ ದುರಹಂಕಾರದ ಅಭಿವ್ಯಕ್ತಿಯಾಗಿ ಬದಲಾಗಬಾರದು.ನಾವು ಸಮತೋಲನವನ್ನು ಕಾಯ್ದುಕೊಳ್ಳಬೇಕು ಎಂದರು. ವಿರೋಧ ಪಕ್ಷಗಳಿಗೆ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ಸಲಹೆಗಳನ್ನು ನೀಡಲು ಸಿದ್ಧನಿದ್ದೇನೆ, ಆದರೆ ಚಳಿಗಾಲದ ಅಧಿವೇಶನದಲ್ಲಿ ಉಭಯ ಸದನಗಳ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಬಾರದು ಎಂದು ಹೇಳಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *