ವೀಕೆಂಡ್ನಲ್ಲಿಯೂ ಹೋಟೆಲ್ಗಳು ಬಂದ್, ಗ್ರಾಹಕರಿಗೆ ತಾತ್ಕಾಲಿಕ ಸೇವೆ ಮಾತ್ರ.
ಬೆಂಗಳೂರು : ಸಾವಿರಾರು ಕಿಲೋಮೀಟರ್ ದೂರದಲ್ಲಿ ನಡೆಯುತ್ತಿರುವಂತಹ ಯುದ್ಧದ ಪರಿಣಾಮ ಬೆಂಗಳೂರಿನ ಹೋಟೆಲ್ ಉದ್ಯಮದ ಮೇಲೆ ನೇರವಾಗಿ ಪರಿಣಾಮ ಬೀರಿದೆ. ರಾಜಧಾನಿ ಬೆಂಗಳೂರಿನ ಬಹುತೇಕ ಹೋಟೆಲ್ಗಳು ಎಲ್ಪಿಜಿ ಗ್ಯಾಸ್ ಪೂರೈಕೆ ವ್ಯತ್ಯಯದಿಂದಾಗಿ ಬಂದ್ ಆಗಿವೆ.
ಗಾಂಧಿನಗರದಲ್ಲಿರುವ ಜನಪ್ರಿಯ ಐಡಿಸಿ (ಇಡ್ಲಿ, ದೋಸೆ, ಕಾಫಿ) ಹೋಟೆಲ್ ಕೂಡ ನಿನ್ನೆ ಮತ್ತು ಇಂದು ಬಂದ್ ಆಗಿದೆ. ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ಗಳ ಪೂರೈಕೆಯಲ್ಲಿ ದೊಡ್ಡ ಮಟ್ಟದ ಕೊರತೆ ಕಾಡುತ್ತಿದ್ದು, ಇದು ಹೋಟೆಲ್ಗಳ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಪ್ರಸ್ತುತ ಪರಿಸ್ಥಿತಿ ಇನ್ನೂ ಒಂದು ವಾರದಿಂದ ಹತ್ತು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.
ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಹೋಟೆಲ್ ಸನ್ಮಾನ್ನಲ್ಲಿ ಗ್ಯಾಸ್ ಅಭಾವದ ಕಾರಣ ಸೌತ್ ಇಂಡಿಯನ್ ಮೀಲ್ಸ್ ಸೇವೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಲಿಮಿಟೆಡ್ ಆಹಾರ ಮಾತ್ರ ಲಭ್ಯವಿದೆ ಎಂದು ಗ್ರಾಹಕರಿಗೆ ಸೂಚನಾ ಫಲಕ ಹಾಕಲಾಗಿದೆ. ಇದೇ ವೇಳೆ ಗದಗ ಎಪಿಎಂಸಿ ಆವರಣದಲ್ಲಿ ಸಹ ಸಿಲಿಂಡರ್ ಕೊರತೆಯಿಂದ ಬಹುತೇಕ ಹೋಟೆಲ್ಗಳು ಬಂದ್ ಆಗಿವೆ. ಶನಿವಾರ ಜಾನುವಾರು ಸಂತೆ ಹಿನ್ನೆಲೆ ಸಾವಿರಾರು ರೈತರು ಬಂದಿದ್ದರೂ, ಓಪನ್ ಇರುವ ಒಂದೇ ಹೋಟೆಲ್ ಮುಂದೆ ಉಪಹಾರಕ್ಕಾಗಿ ಕ್ಯೂ ಕಾಣಿಸಿಕೊಂಡಿದೆ.
For More Updates Join our WhatsApp Group :




