ಸರಗಳ್ಳನ ಚೇಸ್​​ ಮಾಡುವಾಗ ಮಧುಗಿರಿ ಪೊಲೀಸರಿದ್ದ ಕಾರು ಅಪಘಾತ

ಅಪಘಾತಕ್ಕೀಡಾದ ಕಾರು

ಅಪಘಾತಕ್ಕೀಡಾದ ಕಾರು

ತುಮಕೂರು: ಸರಗಳ್ಳನ ಚೇಸ್​​ ಮಾಡುತ್ತಿದ್ದಾಗ ಕಾರು ಅಪಘಾತವಾಗಿ ಮಧುಗಿರಿ ಠಾಣೆಯ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಆಂಧ್ರ ಪ್ರದೇಶದ ಮಣೂರು ಬಳಿ ಶನಿವಾರ ಘಟನೆ ನಡೆಯಿತು. ಅಪರಾಧ ವಿಭಾಗದ ಸಿಬ್ಬಂದಿಯಾದ ಪ್ರಕಾಶ್​, ಮುದ್ದರಾಜು ಹಾಗೂ ರಮೇಶ್ ಅವರಿಗೆ ಗಾಯಗಳಾಗಿವೆ.

ಶನಿವಾರ ಮಧುಗಿರಿ ಪಟ್ಟಣದಲ್ಲಿ ಮಹಿಳೆಯಿಂದ 70 ಗ್ರಾಂ ಚಿನ್ನದ ಸರ ಕದ್ದು ಆರೋಪಿ ಎಸ್ಕೇಪ್ ಆಗಿದ್ದ. ಸಂತ್ರಸ್ತ ಮಹಿಳೆ ಕೂಡಲೇ ಮಧುಗಿರಿ ಪೊಲೀಸ್​ ಠಾಣೆಗೆ ದೂರು ನೀಡಿದ್ದ‌‌ರು. ಕಳ್ಳನ ಜಾಡು ಹಿಡಿದು ಹೊರಟ ಪೊಲೀಸರು ಆತನನ್ನು ಹಿಡಿಯುವ ಭರದಲ್ಲಿ ವೇಗವಾಗಿ ಕಾರು ಚಲಾಯಿಸಿದ್ದಾರೆ. ಈ ವೇಳೆ ಸ್ಟೇರಿಂಗ್ ಲಾಕ್​ ಆಗಿ ಕಾರು ಪಲ್ಟಿಯಾಗಿದೆ. ಪರಿಣಾಮ ಮೂವರು ಗಾಯಗೊಂಡಿದ್ದಾರೆ.

ಗಾಯಾಳು ಪೊಲೀಸ್ ಸಿಬ್ಬಂದಿಗೆ ಆಂಧ್ರದ ಧರ್ಮಾವರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಧರ್ಮಾವರಂ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *