MP Renukacharya: ಸೋಲಿಸಿದ್ದು ನಮ್ಮವರೇ..! ಅವರೆಲ್ಲಾ ಪಕ್ಷ ಬಿಡ್ತಾರೆ ಎಂದ ಮಾಜಿ ಶಾಸಕ

ಬೆಂಗಳೂರು: ಕಳೆದ ಒಂದು ತಿಂಗಳಿಂದ ಯಡಿಯೂರಪ್ಪರನ್ನು ಭೇಟಿ ಮಾಡಿರಲಿಲ್ಲ. ಯಡಿಯೂರಪ್ಪ ಮುಖ ನೋಡಿದ್ರೆ ನನಗೆ ಏನೋ ಸಂತೋಷ. ಯಡಿಯೂರಪ್ಪ ಅಂತಾ ದೊಡ್ಡ ನಾಯಕರು ಬಿಜೆಪಿಯಲ್ಲಿ ಯಾರೂ ಇಲ್ಲ. ಪಕ್ಷವನ್ನು ಪ್ರೀತಿಸಿದವರು, ಯಡಿಯೂರಪ್ಪ ಒಬ್ಬರು ಮಾಸ್ ಲೀಡರ್ ಆಗಿದ್ದು, ಇವರನ್ನ  ಕೆಳಗೆ ಇಳಿಸಿದ್ರೆ ಬಿಜೆಪಿಗೆ ಕಷ್ಟ ಅಂತಾ ಹಿಂದೆ ಕಾಂಗ್ರೆಸ್- ಜೆಡಿಎಸ್ ನವರು ನನಗೆ ಹೇಳಿದ್ರು. ಯಡಿಯೂರಪ್ಪರ ಮುಖ ನೋಡಿದ್ರೆ ನನಗೆ ಸಮಾಧಾನ ಆಗುತ್ತೆ. ಯಡಿಯೂರಪ್ಪ ಕೀಳುಮಟ್ಟದ ರಾಜಕಾರಣಿ ಅಲ್ಲ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದರು.

ಶಾಸಕ ವಿಜಯೇಂದ್ರ‌ ರಾಜ್ಯಾಧ್ಯಕ್ಷ ಆಗೋದ್ರಲ್ಲಿ ತಪ್ಪೇನು ಎಂದ ರೇಣುಕಾಚಾರ್ಯ, ಅವರು ಯುಥ್ ಐಕಾನ್, ಅವರಿಗೆ ಪಕ್ಷದ ನಾಯಕತ್ವ ಕೊಟ್ಟರೆ ತಪ್ಪೇನು ಎಂದರು. ವಿಜಯೇಂದ್ರ ತಮ್ಮದೇ ಆದ ಸ್ವಂತ ಬಲದಿಂದ ಬೆಳೆಯುತ್ತಿದ್ದಾರೆ ಎಂದರು.

ಯುವಕ

ನಾನು ಎಲ್ಲ ಕಡೆ ಪ್ರವಾಸ ಮಾಡಿದಾಗ ಕಾರ್ಯಕರ್ತರು ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ವಿಜಯೇಂದ್ರ‌ ರಾಜ್ಯಾಧ್ಯಕ್ಷ ಆಗಬೇಕೆಂದು ಕೇಳುತ್ತಿದ್ದಾರೆ. ನಾನು ಅದನ್ನೇ ಕೇಳ್ತೀನಿ ಎಂದು ವಿಜಯೇಂದ್ರ‌ ಪರ ರೇಣುಕಾಚಾರ್ಯ ಬ್ಯಾಟ್ ಬೀಸಿದರು.

ಯಡಿಯೂರಪ್ಪ ಯಾವತ್ತಿಗೂ ಅವಕಾಶವಾದಿ ರಾಜಕಾರಣಿ ಅಲ್ಲ. ನಾನು ನೋ ಕಾಂಪ್ರಮೈಸ್, ನಾನು ಯಾರಿಗೂ ಹೆದರಲ್ಲ, ಜಗ್ಗಲ್ಲ, ಬಗ್ಗಲ್ಲ. ರಾಜಕಾರಣದಲ್ಲಿ ಒಬ್ಬ ಗಾಡ್ ಫಾದರ್ ಬೇಕು. ಈ ಹಿಂದೆ ಯಡಿಯೂರಪ್ಪರ ನಾಯಕತ್ವ ಇತ್ತು. ಯಡಿಯೂರಪ್ಪ ನಾಯಕತ್ವ ಇಲ್ಲದೇ ಇನ್ನೂ ಹಲವರು ಹೊರಗೆ ಹೋಗ್ತಾರೆ ಎಂದು ಸ್ಫೋಟಕ ಹೇಳಿಕೆ ನೀಡಿದರು.

ಈ ಹಿಂದೆ ಯಡಿಯೂರಪ್ಪ  ಅವರನ್ನೇ ನಂಬಿಯೇ ಕಾಂಗ್ರೆಸ್, ಜೆಡಿಎಸ್ ನಿಂದ ಶಾಸಕರು ಬಂದಿದ್ದರು. ಮೋದಿಯವರು ಯಡಿಯೂರಪ್ಪರನ್ನು ಕಡೆಗಣಿಸಿಲ್ಲ. ಆದರೆ ಮಧ್ಯದಲ್ಲಿ ಕೆಲವರು ಗೇಮ್ ಆಡ್ತಿದ್ದಾರೆ. ಅದರ ಪರಿಣಾಮ ಮುಂದಿನ ಚುನಾವಣೆಯಲ್ಲಿ ಗೊತ್ತಾಗುತ್ತದೆ. ಅವರ ಹೆಸರು ಇವಾಗ ನಾನು ಬಾಯ್ಬಿಟ್ಟು ಹೇಳಲ್ಲ ಎಂದು ಪರೋಕ್ಷವಾಗಿ ಬಿಎಲ್ ಸಂತೋಷ್ ವಿರುದ್ಧ ವಾಗ್ದಾಳಿ ನಡೆಸಿದರು.

ಇವಾಗ ಪಕ್ಷದಲ್ಲಿ ಹೇಳೋರು ಇಲ್ಲ, ಕೇಳೋರು ಇಲ್ಲ. ಬಿಜೆಪಿಯಲ್ಲಿ ಈಗಾಗಲೇ ಬಹಳ ಜನರು ಬೇಸತ್ತಿದ್ದಾರೆ. ಮುಂದೆ ಅವರು ಎಲ್ಲರು ಬಿಜೆಪಿ ಬಿಟ್ಟು ಹೋಗ್ತಾರೆ ಎಂದು ಹೇಳಿದರು.

ಯಡಿಯೂರಪ್ಪ ಬಿಟ್ಟರೆ, ಬೇರೆ ಯಾರು ಕೈಯಲ್ಲಿಂದಲೂ ಪಕ್ಷ ನಿಭಾಯಿಸೋಕೆ ಆಗಲ್ಲ. ಯಡಿಯೂರಪ್ಪರಂತ ಆಕರ್ಷಣೆಯ ನಾಯಕತ್ವ ಬೇಕು ಅಂತಾ ಕೇಳ್ತಿದ್ದೇನೆ. ಬಿಜೆಪಿಯಲ್ಲಿ ಒಂದು ಗುಂಪು ಕಟ್ಟಿಕೊಂಡು ಪಕ್ಷವನ್ನು ಕಪಿ ಮುಷ್ಟಿಯಲ್ಲಿ ಹಿಡಿದುಕೊಂಡಿದ್ದಾರೆ.

ಹಾಗಂತ ಬೇರೆಯವರನ್ನು ನಾನು ಅಸಮರ್ಥರು ಅಂತಾ ಹೇಳ್ತಿಲ್ಲ. ಬಿಜೆಪಿಯನ್ನು ಮತದಾರರು ಸೋಲಿಸಿಲ್ಲ, ಸೋಲಿಸಿದ್ದು ನಮ್ಮವರೇ ಎಂದು ಪಕ್ಷದೊಳಗಿನ ಆಂತರಿಕ ಕಲಹ ಬಿಚ್ಚಿಟ್ರು.

Pragati TV Social Connect for more latest u

Leave a Reply

Your email address will not be published. Required fields are marked *