ಪೊಲೀಸರ ತನಿಖೆ ಬಗ್ಗೆ ಪ್ರಶ್ನೆ; ಗೃಹ ಸಚಿವರ ಪ್ರತಿಕ್ರಿಯೆ.
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಕೇಸ್ನಲ್ಲಿ ದರ್ಶನ್ಅವರು ಪ್ರಮುಖ ಆರೋಪಿ ಆಗಿದ್ದಾರೆ. ಇನ್ನುಳಿದ ಆರೋಪಿಗಳ ಮೊಬೈಲ್ ವಶಕ್ಕೆ ಪಡೆದ ಪೊಲೀಸರ ತನಿಖಾ ಕ್ರಮದ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಆರೋಪಿಗಳ ಮೊಬೈಲ್ ಅನ್ನು ಬೇರೆ ಎಲ್ಲೋ ಮಹಜರು ಮಾಡಿ, ಅದನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಮಾಡಿದ್ದು ಎಂದು ಪೊಲೀಸರು ಹೇಳಿದ್ದಾರೆ ಎಂಬುದು ಆರೋಪಿಗಳ ಲಾಯರ್ ವಾದ. ಆ ಬಗ್ಗೆ ಗೃಹಸಚಿವ ಜಿ. ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದಾರೆ. ‘ಆರೋಪಿಗಳ ಪರ ವಕೀಲರು ತಕರಾರು ಮಾಡಲಿ. ನಮ್ಮ ಕೆಲಸ ನಾವು ಮಾಡುತ್ತೇವೆ. ಆರೋಪಿಗಳ ಪರವಾದ ವಕೀಲರು ಮಾಡುವ ಆಪಾದನೆಗಳಿಗೆ ಪೊಲೀಸ್ ಇಲಾಖೆಯವರು ಸರಿಯಾದ ಉತ್ತರ ಕೊಡಬೇಕು, ಕೊಡುತ್ತಾರೆ’ ಎಂದು ಜಿ. ಪರಮೇಶ್ವರ ಅವರು ಹೇಳಿದ್ದಾರೆ.
For More Updates Join our WhatsApp Group :



