ಆಪರೇಷನ್ ಸಿಂಧೂರ್ ಯಶಸ್ವಿ, ಪ್ರಧಾನಿ ಮೋದಿಗೆ ಎನ್​ಡಿಎ ಸಂಸದರಿಂದ ಗೌರವ ಸನ್ಮಾನ.

ಆಪರೇಷನ್ ಸಿಂಧೂರ್ ಯಶಸ್ವಿ, ಪ್ರಧಾನಿ ಮೋದಿಗೆ ಎನ್​ಡಿಎ ಸಂಸದರಿಂದ ಗೌರವ ಸನ್ಮಾನ.

ನವದೆಹಲಿ: ಆಪರೇಷನ್ ಸಿಂಧೂರ್ ಮತ್ತು ಆಪರೇಷನ್ ಮಹಾದೇವ್ ಯಶಸ್ಸಿನ ಬಳಿಕ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸನ್ಮಾನಿಸಿದರು . ಎಲ್ಲೆಲ್ಲೂ ಹರ ಹರ ಮಹಾದೇವ ಘೋಷಣೆ ಮೊಳಗಿತು. ಸಭೆಯಲ್ಲಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಪ್ರತೀಕಾರವಾಗಿ ಪಾಕಿಸ್ತಾನದ ಮೇಲೆ ಯಶಸ್ವಿ ಮಿಲಿಟರಿ ದಾಳಿಗಾಗಿ ಪ್ರಧಾನಿ ಮೋದಿಯವರ ನಾಯಕತ್ವವನ್ನು ಎನ್‌ಡಿಎ ಸಂಸದರು ಶ್ಲಾಘಿಷಿದರು.

ಆಗಸ್ಟ್ 7 ರಂದು ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗುವ ಎರಡು ದಿನಗಳ ಮೊದಲು ಈ ನಿರ್ಣಾಯಕ ಸಭೆ ನಡೆದಿದೆ. ಆಗಸ್ಟ್ 21 ರಂದು ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕ ಮತ್ತು ಸಂಸತ್ತಿನ ಮುಂಗಾರು ಅಧಿವೇಶನದೊಳಗೆ, ಎನ್‌ಡಿಎ ತನ್ನ ಅಭ್ಯರ್ಥಿಯನ್ನು ಘೋಷಿಸಬೇಕಾಗುತ್ತದೆ. ಮೈತ್ರಿಕೂಟದ ಬಹುಮತದಿಂದಾಗಿ ಅವರ ಆಯ್ಕೆ ಖಚಿತವಾಗಿರುತ್ತದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *