ತುಮಕೂರು : ಬಣ ರಾಜಕೀಯದ ಗುದ್ದಾಟಕ್ಕೆ ಬಲಿಯಾಗಿ ದೇವರು ಅನಾಥವಾಗಿರುವ ಘಟನೆ ತುಮಕೂರು ಗ್ರಾಮಾಂತರದ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ.
ದೇವರ ಉತ್ಸವಕ್ಕಾಗಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಜಗಳ ನಡೆದು ಮೆರವಣಿಗೆ ಬಂದ್ ಮಾಡಲಾಗಿದೆ. ಹೀಗಾಗಿ ಜಿಲ್ಲಾಡಳಿತ ಗ್ರಾಮದಲ್ಲಿ ಮುಂಜಾಗೃತಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಿ ಆದೇಶ ಹೊರಡಿಸಿದೆ.
ಇನ್ನೂ ಭದ್ರತೆಯ ದೃಷ್ಠಿಯಿಂದ 3 ಎಸ್ಐ, 2 ಸಿಪಿಐ, 1 ಡಿವೈಎಸ್ಪಿ, ಒಂದು ಡಿಎಆರ್ ತುಕಡಿ ನಿಯೋಜನೆ ಮಾಡಲಾಗಿದ್ದು, ರಾಜಕೀಯ ದ್ವೇಷದಿಂದಾಗಿ ಒಂದೇ ಗ್ರಾಮದಲ್ಲಿ ಎರಡು ಪಾಂಡುರಂಗ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.
ಮೂಲ ಪಾಂಡುರಂಗ ದೇವಸ್ಥಾನ ಗ್ರಾಮಸ್ಥರ ಕಮಿಟಿ ಅಧೀನದಲ್ಲಿದ್ದು, ಇದಕ್ಕೆ ಸೆಡ್ಡು ಹೊಡೆದು ಮತ್ತೊಂದು ದೇವಸ್ಥಾನ ನಿರ್ಮಾಣ ಮಾಡಿರುವ ಆರೋಪ ಕೇಳಿ ಬಂದಿದೆ.
ಮಕರ ಸಂಕ್ರಾಂತಿ ಹಿನ್ನಲೆ ಮೂಲ ದೇವರ ಮೆರವಣಿಗೆ ಇಟ್ಟುಕೊಂಡಿದ್ದರು, ಈ ವೇಳೆ ಇನ್ನೊಂದು ಪಾಂಡುರಂಗ ದೇವಸ್ಥಾನ ಮಾಡಿಕೊಂಡಿರುವವರು ಗಲಾಟೆ ತೆಗೆದಿದ್ದಾರೆ. ಸದ್ಯ ಎರಡು ದೇವಾಲಯ ಮುಜರಾಯಿಗೆ ಬರೆಯುವಂತೆ ಗ್ರಾಮಸ್ಥರು ಒತ್ತಾಯ ಮಾಡುತ್ತಿದ್ದಾರೆ.
Pragati TV Social Connect for more latest u