ಧರ್ಮಸ್ಥಳಕ್ಕೆ ಪವನ್ ಕಲ್ಯಾಣ್ ಭೇಟಿ: ಸೆ. 11 ರಂದು ವಿಶೇಷ ಪೂಜೆ, ಆರತಿ ಸೇವೆ.

ಧರ್ಮಸ್ಥಳಕ್ಕೆ ಪವನ್ ಕಲ್ಯಾಣ್ ಭೇಟಿ: ಸೆ. 11 ರಂದು ವಿಶೇಷ ಪೂಜೆ, ಆರತಿ ಸೇವೆ.

ಬೆಳ್ತಂಗಡಿ : ಧಾರ್ಮಿಕ ಭಕ್ತಿಯ ಪವಿತ್ರ ಕ್ಷೇತ್ರ ಧರ್ಮಸ್ಥಳ ಇತ್ತೀಚೆಗೆ ವಿವಾದಗಳಿಂದ ಸುದ್ದಿಯಲ್ಲಿದ್ದು, ಇದೀಗ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಜನಪ್ರಿಯ ನಟ ಪವನ್ ಕಲ್ಯಾಣ್ ಅವರು ಸೆಪ್ಟೆಂಬರ್ 11 ರಂದು ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

ಧರ್ಮಸ್ಥಳದ ಪರ ನಿಲುವು ಸ್ಪಷ್ಟಪಡಿಸಲು ಪವನ್ ಧರ್ಮಸ್ಥಳಕ್ಕೆ

ಇತ್ತೀಚೆಗೆ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಯುತ್ತಿದ್ದು, ಧರ್ಮಾಧಿಕಾರಿಗಳ ವಿರುದ್ಧ ಆರೋಪ ಮಾಡಿದ ಚಿನ್ನಯ್ಯ ಎಂಬಾತನನ್ನು ಬಂಧಿಸಿ ತನಿಖೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪವನ್ ಕಲ್ಯಾಣ್ ಅವರ ಧರ್ಮಸ್ಥಳಕ್ಕೆ ಆಗಮಿಸುತ್ತಿರುವುದು ಮಹತ್ವದ್ದಾಗಿದೆ.
ಪವನ್, ಧರ್ಮಸ್ಥಳದ ಪರವಾಗಿ ನಿಲುವು ವ್ಯಕ್ತಪಡಿಸುವ ನಿರೀಕ್ಷೆ ಇದೆ.

ಭೇಟಿ ವಿವರ:

  •  ಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ
  • ದಿನಾಂಕ: ಸೆಪ್ಟೆಂಬರ್ 11, 2025
  • ಸಮಯ: ಸಂಜೆ 5 ಗಂಟೆಗೆ ಆಗಮನೆ
  • ಕಾರ್ಯಕ್ರಮಗಳು: ದೇವಾಲಯದಲ್ಲಿ ವಿಶೇಷ ಪೂಜೆ, ಆರತಿ ಸೇವೆ, ಧರ್ಮಾಧಿಕಾರಿಗಳ ಭೇಟಿಯ ಸಾಧ್ಯತೆ

ಹಿಂದೂಪರ ನಿಲುವುಗಳು: ಪವನ್ ಕಲ್ಯಾಣ್

ಹಿಂದೂ ಸಂಸ್ಕೃತಿಯ ಬಗ್ಗೆ ಸದಾ ನಿಷ್ಠೆ ತೋರಿಸಿರುವ ಪವನ್:

  • ತಿರುಪತಿಯ ಪ್ರಸಾದದಲ್ಲಿ ಗೋಪದಾರ್ಥ ಪತ್ತೆಯಾದಾಗ ತಿರುಪತಿಗೆ ಭೇಟಿ
  • ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಸ್ಪಷ್ಟ ನಿಲುವು
  • “ನಾನು ಸನಾತನ ಹಿಂದೂ” ಎಂದು ಘೋಷಣೆ

ರಾಜಕೀಯ ಹಿನ್ನೆಲೆ:

ಪವನ್ ಕಲ್ಯಾಣ್ ಅವರು ಜನಸೇನಾ ಪಕ್ಷದ ಮುಖ್ಯಸ್ಥರಾಗಿದ್ದು, ಪ್ರಸ್ತುತ ಟಿಡಿಪಿ ಮತ್ತು ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾರೆ. ಧರ್ಮಸ್ಥಳದ ಕುರಿತು ನಡೆಯುತ್ತಿರುವ ಚರ್ಚೆಯ ನಡುವೆ ಈಗ ಅವರ ಭೇಟಿ ಧಾರ್ಮಿಕ ಹಾಗೂ ರಾಜಕೀಯವಾಗಿ ಪ್ರಭಾವ ಬೀರುವ ಸಾಧ್ಯತೆ ಇದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *