ನನ್ನ ಗಂಡನನ್ನು ಹುಡುಕಿ ಕೊಡಿ ಪ್ಲೀಸ್…!

ರವಿಕುಮಾರ್ ಮತ್ತು ಗೀತಾ ಹತ್ತು ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ಆದರೆ ಒಂದು  ತಿಂಗಳಿಂದೆ ಕೃಷ್ಣಪ್ಪ ಎಂಬ ಕಂಟ್ರಾಕ್ಟರ್ ಬಳಿ ಕೆಲಸಕ್ಕೆ ಹೋಗುವೆ ಎಂದು ಹೇಳಿ ಹೋದ  ರವಿಕುಮಾರ್ ನಾಪತ್ತೆಯಾಗಿದ್ದಾರೆ. ಇವರು ತಿಪಟೂರು ತಾಲೂಕಿನ ಗೊರಗೊಂಡನಹಳ್ಳಿ ಎಸ್ಸಿ ಕಾಲೋನಿಯ ವಾಸಿಯಾಗಿದ್ದರು.

ಗೀತಾ&ರವಿಕುಮಾರ್ ಅವರಿಗೆ ೯ ವರ್ಷದ ಉಲ್ಲಾಸ್ ಎಂಬ ಮುದ್ದಾದ ಗಂಡು ಮಗುವಿದೆ. ಡಿಸೆಂಬರ್ ಹತ್ತನೇ ತಾರೀಕು ಗೀತಾಳಿಗೆ ಆಕ್ಸಿಡೆಂಟ್ ಆದ ಕಾರಣ ಕಾಲು ಮುರಿದು ಹೋಗಿದೆ. ತಂದೆ ಗಾಗಿ ಕಾಯುತ್ತಿರುವ ಮಗ . ಗಂಡನನ್ನು ಹುಡುಕಿ ಕೊಡುವಂತೆ ಪೋಲೀಸರಲ್ಲಿ ಅಂಗಲಚುತ್ತಿರುವ ಗೀತಾ…

ಗೀತಾ ಅವರು ಎಸ್‌ಸಿ ಜನಾಂಗಕ್ಕೆ ಸೇರಿದವರು , ರವಿಕುಮಾರ್ ಅವರು ಗೌಡ ಜನಾಂಗಕ್ಕೆ ಸೇರಿದವರಾಗಿರುತ್ತಾರೆ.

ಮೂರು ತಿಂಗಳಾದರೂ ಮನೆ ಬಾಡಿಗೆ ಕಟ್ಟಿಲ್ಲ ?

ಗಂಡನ ಮನೆಯಲ್ಲಿ ದಿನಸಿ ಇಲ್ಲದೇ ತಿನ್ನಲು ಅನ್ನವಿಲ್ಲದೇ ತಾಯಿ ಮನೆಯಲ್ಲಿ ಕಾಲ ಕಳೆಯುತ್ತಿರುವ ಗೀತಾ ಹಾಗೂ ಅವರ ಮಗ.

ಗಂಡ ಹೆಂಡತಿ ಇಬ್ಬರ ನಡುವೆ ಯಾವಾಗಲು ಜಗಳ ನೆಡೆಯುತ್ತಿತ್ತು ಎಂದು ಅವರ ನೆರೆ ಹೊರೆಯವರು ತಿಳಿಸಿದರು.

ತಿಪಟೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಒಂದು ತಿಂಗಳು ಕಳೆದರೂ ನ್ಯಾಯ ಸಿಗದೇ ಕಂಗಾಲಾದ ಗೀತಾ…

Pragati TV Social Connect for more latest u

Leave a Reply

Your email address will not be published. Required fields are marked *