ಪುನೀತ್ ರಾಜ್​​ಕುಮಾರ್ 4ನೇ ಪುಣ್ಯಸ್ಮರಣೆ: ಸಮಾಧಿಗೆ ಭಾರಿ ಜನಸಾಗರ, ಅಭಿಮಾನಿ ಪ್ರೀತಿಯಲ್ಲಿ ಕಡಿತವಿಲ್ಲ.

ಪುನೀತ್ ರಾಜ್​​ಕುಮಾರ್ 4ನೇ ಪುಣ್ಯಸ್ಮರಣೆ: ಸಮಾಧಿಗೆ ಭಾರಿ ಜನಸಾಗರ, ಅಭಿಮಾನಿ ಪ್ರೀತಿಯಲ್ಲಿ ಕಡಿತವಿಲ್ಲ.

ನಟ ಪುನೀತ್ ರಾಜ್​​ಕುಮಾರ್ ಅವರು ಅಗಲಿ 4 ವರ್ಷಗಳು ಕಳೆದಿವೆ. ಅವರ ಮೇಲೆ ಜನರು ಇಟ್ಟ ಅಭಿಮಾನ ಸ್ವಲ್ಪವೂ ಕಡಿಮೆ ಆಗಿಲ್ಲ. ಪ್ರತಿದಿನ ಹಲವಾರು ಅಭಿಮಾನಿಗಳು ಪುನೀತ್ ರಾಜ್​​ಕುಮಾರ್ ಸಮಾಧಿ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಇಂದು (ಅಕ್ಟೋಬರ್ 29) ಅವರ 4ನೇ ವರ್ಷದ ಪುಣ್ಯಸ್ಮರಣೆ .ಈ ಹಿನ್ನೆಲೆಯಲ್ಲಿ ಸಾವಿರಾರು ಅಭಿಮಾನಿಗಳು ಸಮಾಧಿಗೆ ನಮಿಸಿದ್ದಾರೆ.

ಈ ದಿನದಂದು ಅಪ್ಪುಗೆ ಗೌರವ ಸಲ್ಲಿಸಲು ರಾಜ್ಯದ ಬೇರೆ ಬೇರೆ ಊರುಗಳಿಂದ ಅಭಿಮಾನಿಗಳು ಬೆಂಗಳೂರಿಗೆ ಬಂದಿದ್ದಾರೆ. ಪುನೀತ್ ರಾಜ್​​ಕುಮಾರ್ ಸಮಾಧಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಅನ್ನದಾನ, ರಕ್ತದಾನ, ನೇತ್ರದಾನ ನೋಂದಣಿ ಮುಂತಾದ ಜನಪರ ಕಾರ್ಯಗಳನ್ನು ಮಾಡಲಾಗುತ್ತಿದೆ. ಡಾ. ರಾಜ್​​ಕುಮಾರ್ ಕುಟುಂಬದರು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *