ರಾಮ ಮಂದಿರ ಸ್ವಚ್ಛತಾ ಸಿಬ್ಬಂದಿ ಮೇಲೆ ಅತ್ಯಾಚಾರ ಆರೋಪ

ಅಯೋದ್ಯೆ : ರಾಮಜನ್ಮಭೂಮಿ ಪುಣ್ಯಕ್ಷೇತ್ರ ಶ್ರೀ ರಾಮ ಮಂದಿರದಲ್ಲಿ ಸ್ವಚ್ಛತಾ ಸಿಬ್ಬಂದಿ ಹಾಗೂ ಕಾಲೇಜು ವಿದ್ಯಾರ್ಥಿಯೊಬ್ಬಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ, ಅತ್ಯಾಚಾರ ನಡೆಸಿದ ಆರೋಪ ಕೇಳಿಬಂದ ಬೆನ್ನಲ್ಲೇ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ

ಆರೋಪಿಗಳಾದ ವಿನಯ್ ಕುಮಾರ್ ಹಾಗೂ ಷರೀಕ್ ಎಂಬುವವರನ್ನು ಸಂತ್ರಸ್ತೆ ಗುರುತಿಸಿದ್ದಾರೆ. ಅಯೋಧ್ಯೆ ಪಟ್ಟಣದ ಕಾಲೇಜಿನಲ್ಲಿ ತೃತೀಯ ಬಿಎ ವಿದ್ಯಾರ್ಥಿನಿ ಎಂದು ಈಕೆ ರಾಮಜನ್ಮಭೂಮಿ ದೇವಾಲಯದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಎಂದು ಹೇಳಲಾಗಿದೆ

“ಅಯೋಧ್ಯೆ ಜಿಲ್ಲೆಯ ಸಹದತ್ ಗಂಜ್ ನಿವಾಸಿ ವಂಶ್ ಚೌಧರಿ ಎಂಬಾತ, ವಿಹಾರಕ್ಕೆ ಕರೆದೊಯ್ಯುವುದಾಗಿ ಭರವಸೆ ನೀಡಿ ಆಗಸ್ಟ್ 16ರಂದು ಅತಿಥಿಗೃಹವೊಂದಕ್ಕೆ ಕರೆದೊಯ್ದು ಕೂಡಿಹಾಕಿ ಇತರ ಇಬ್ಬರು ಸ್ನೇಹಿತರ ಜತೆ ಸೇರಿ ಅತ್ಯಾಚಾರ ಎಸಗಿದ್ದಲ್ಲದೇ, ಇತರ ಮೂವರು ಸ್ನೇಹಿತರನ್ನು ಆಹ್ವಾನಿಸಿ ಆಘಾತ ಉಂಟುಮಾಡಿದ್ದನು ಎನ್ನಲಾಗಿದೆ. ಅತಿಥಿಗೃಹದಿಂದ ಬನವೀರಪುರ ಬ್ಯಾರೇಜ್ ಗೆ ಕರೆದೊಯ್ದು ಮತ್ತೆ ಕಿರುಕುಳ ನೀಡಿದರು. ಆಗಸ್ಟ್ 18ರಂದು ಸಂತ್ರಸ್ಥೆಯನ್ನು ಬಿಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದೆ.

ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ನನ್ನನ್ನು ಹಾಗೂ ಕುಟುಂಬದವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಆಗಸ್ಟ್ 25ರಂದು ನಾನು ದೇವಾಲಯಕ್ಕೆ ಹೋಗುತ್ತಿದ್ದಾಗ ಮತ್ತೆ ನನ್ನನ್ನು ಅಪಹರಿಸಿದರು. ಉದಿತ್ ಕುಮಾರ್, ಸತ್ರಮ್ ಚೌಧರಿ ಮತ್ತು ಇಬ್ಬರು ಅಪರಿಚಿತರು ಆತನ ಜತೆಗಿದ್ದರು. ಕಾರಿನಲ್ಲೇ ಅತ್ಯಾಚಾರ ಎಸಗುವ ಪ್ರಯತ್ನ ಮಾಡಿದರು. ಆದರೆ ಕಾರು ವಿಭಜಕ್ಕೆ ಢಿಕ್ಕಿ ಹೊಡೆಯಿತು. ಹಾಗಾಗಿ ಅವರ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು” ಎಂದಿದ್ದಾರೆ.

Leave a Reply

Your email address will not be published. Required fields are marked *