ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾತಮ್ಮ ದೇಶದಲ್ಲಿ ದೇಶದ್ರೋಹ ಪ್ರಕರಣ ಎದುರಿಸುತ್ತಿದ್ದು, ಇಂದು ತೀರ್ಪು ಪ್ರಕಟವಾಗಲಿದೆ. ಅದಕ್ಕೂ ಮುನ್ನ ದೇಶದಲ್ಲಿ ಮತ್ತೆ ಹಿಂಸಾಚಾರಗಳು ಭುಗಿಲೆದ್ದಿವೆ. ಈ ಕಾರಣದಿಂದಾಗಿ ಬಾಂಗ್ಲಾದೇಶದಾದ್ಯಂತ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಕಳೆದ ವರ್ಷ ತಮ್ಮ ದೇಶದಿಂದ ಪಲಾಯನ ಮಾಡಬೇಕಾಯಿತು.
ಶೇಖ್ ಹಸೀನಾ ವಿರುದ್ಧ ನ್ಯಾಯಾಲಯದ ತೀರ್ಪು ಬರುವ ಕೆಲವು ಗಂಟೆಗಳ ಮೊದಲು, ಅವರು ಅವಾಮಿ ಲೀಗ್ನ ಫೇಸ್ಬುಕ್ ಪುಟದಲ್ಲಿ ಭಾವನಾತ್ಮಕ ಆಡಿಯೋ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಅವರು ತಮ್ಮ ಪಕ್ಷದ ಬೆಂಬಲಿಗರಿಗೆ, ಭಯಪಡಬೇಡಿ ಏನೂ ಇಲ್ಲ, ನಾನು ಜೀವಂತವಾಗಿದ್ದೇನೆ, ನಾನು ಜೀವಂತವಾಗಿರುತ್ತೇನೆ. ನಾನು ದೇಶದ ಜನರೊಂದಿಗೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಹಿಂಸಾಚಾರ ಮತ್ತು ಅಸ್ಥಿರತೆ ತೀವ್ರಗೊಂಡಿದೆ. ರಾಜಧಾನಿ ಢಾಕಾ ಸೇರಿದಂತೆ ಹಲವಾರು ನಗರಗಳಲ್ಲಿ ಸ್ಫೋಟಗಳು ಮತ್ತು ಬೆಂಕಿ ಹಚ್ಚುವಿಕೆಗಳು ಸಂಭವಿಸಿವೆ. ಇದು ವಿಶೇಷವಾಗಿ ಢಾಕಾದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ.
ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಮಂಡಳಿ (ಐಸಿಟಿ) ಶೇಖ್ ಹಸೀನಾ ವಿರುದ್ಧ ತೀರ್ಪು ನೀಡಲು ಸಿದ್ಧವಾಗುತ್ತಿದ್ದಂತೆ ಈ ಬೆಳವಣಿಗೆ ಸಂಭವಿಸಿದೆ. ಕಳೆದ ವರ್ಷದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಅವರ ಪಾತ್ರಕ್ಕಾಗಿ ಅವರು ವಿಚಾರಣೆಯನ್ನು ಎದುರಿಸುತ್ತಿದ್ದಾರೆ.
ಅಪರಾಧ ಸಾಬೀತಾದರೆ, ಅವರು ಮರಣದಂಡನೆಯನ್ನು ಎದುರಿಸಬೇಕಾಗುತ್ತದೆ. ತೀರ್ಪಿಗೆ ಮುಂಚಿತವಾಗಿ, ಮೊಹಮ್ಮದ್ ಯೂನಸ್ ಸರ್ಕಾರವು ದೇಶಾದ್ಯಂತ ಭದ್ರತಾ ಪಡೆಗಳನ್ನು ಕಟ್ಟೆಚ್ಚರದಲ್ಲಿರಿಸಿದೆ, ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಲು ಆದೇಶಗಳನ್ನು ನೀಡಿದೆ. ಕಳೆದ ಜುಲೈನಲ್ಲಿ ಢಾಕಾದಲ್ಲಿ ನಡೆದ ಅಶಾಂತಿಯ ಸಂದರ್ಭದಲ್ಲಿ ಯಾರ ಮೇಲೂ ಗುಂಡು ಹಾರಿಸಲು ಅಥವಾ ಕೊಲ್ಲಲು ತಾನು ಆದೇಶಿಸಿಲ್ಲ ಎಂದು ಶೇಖ್ ಹಸೀನಾ ನಿರಂತರವಾಗಿ ಸಮರ್ಥಿಸಿಕೊಂಡಿದ್ದಾರೆ.
For More Updates Join our WhatsApp Group :
