ತ್ರಿವಿಕ್ರಮ್ಗೆ ಮತ್ತೆ ಕೈಕೊಟ್ಟರಾ ಅಲ್ಲು ಅರ್ಜುನ್?
ಅಲ್ಲು ಅರ್ಜುನ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟ. ಅವರ ನಟನೆಯ ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾಗಳು ಅಂತರಾಷ್ಟ್ರೀಯ ಪ್ರೇಕ್ಷಕರನ್ನು ಸಹ ಸೆಳೆದಿವೆ. ಇದೀಗ ಅಲ್ಲು ಅರ್ಜುನ್ ತಮಿಳಿನ ಅಟ್ಲಿ ನಿರ್ದೇಶನದ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದು, ಈ ಸಿನಿಮಾವನ್ನು ಹಾಲಿವುಡ್ ಸ್ಟುಡಿಯೋಗಳ ಸಹಯೋಗದೊಂದಿಗೆ ನಿರ್ಮಿಸಲಾಗುತ್ತಿದ್ದು, ಈ ಸಿನಿಮಾ ಮೂಲಕ ಹಾಲಿವುಡ್ ಕದ ತಟ್ಟುವ ಆಲೋಚನೆಯಲ್ಲಿ ಅಲ್ಲು ಅರ್ಜುನ್ ಇದ್ದಾರೆ. ಒಂದೊಂದೆ ಮೆಟ್ಟಿಲು ಏರುತ್ತಾ ಸಾಗುತ್ತಿರುವ ಅಲ್ಲು ಅರ್ಜುನ್, ಏರಲು ಸಹಾಯ ಮಾಡಿದವರನ್ನೇ ನಿರ್ಲಕ್ಷಿಸುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ.
ಅಲ್ಲು ಅರ್ಜುನ್ ಅವರಿಗೆ ಅವರ ವೃತ್ತಿ ಜೀವನದಲ್ಲಿ ಹಲವು ಅತ್ಯುತ್ತಮ ನಿರ್ದೇಶಕರುಗಳು ದೊರಕಿದ್ದಾರೆ. ಸುಕುಮಾರ್, ಭಾಸ್ಕರ್, ಕ್ರಿಶ್, ಗುಣಶೇಖರ್ ಇನ್ನೂ ಹಲವರು ಅಲ್ಲು ಅರ್ಜುನ್ಗೆ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸುಕುಮಾರ್ ಅಲ್ಲು ಅರ್ಜುನ್ಗಾಗಿ ಮೂರು ಸಿನಿಮಾಗಳನ್ನು ನಿರ್ದೇಶಿಸಿದ್ದು ಮೂರಕ್ಕೆ ಮೂರು ಸೂಪರ್ ಹಿಟ್ ಆಗಿವೆ. ‘ಆರ್ಯ’, ‘ಪುಷ್ಪ’ ಮತ್ತು ‘ಪುಷ್ಪ 2’. ಆದರೆ ಸುಕುಮಾರ್ ಈ ಸಾಧನೆ ಮುಂಚೆಯೇ ಮತ್ತೊಬ್ಬ ನಿರ್ದೇಶಕ ಈ ದಾಖಲೆ ಬರೆದಿದ್ದರು ಅದುವೇ ತ್ರಿವಿಕ್ರಮ್ ಶ್ರೀನಿವಾಸ್.
ತೆಲುಗಿನ ಪ್ರತಿಭಾವಂತ ನಿರ್ದೇಶಕರುಗಳಲ್ಲಿ ಒಬ್ಬರಾಗಿರುವ ತ್ರಿವಿಕ್ರಮ್ ಶ್ರೀನಿವಾಸ್, ತೆಲುಗು ಚಿತ್ರರಂಗಕ್ಕೆ ಹಲವು ಅದ್ಭುತ ಸಿನಿಮಾಗಳನ್ನು ನೀಡಿದ್ದಾರೆ. ಅದರಲ್ಲೂ ಅಲ್ಲು ಅರ್ಜುನ್ ಅವರಿಗಾಗಿ ಮೂರು ಸಿನಿಮಾ ನಿರ್ದೇಶಿಸಿ, ಮೂರಕ್ಕೆ ಮೂರು ಸಹ ದೊಡ್ಡ ಬ್ಲಾಕ್ ಬಸ್ಟರ್ ಆಗುವಂತೆ ಮಾಡಿದ್ದಾರೆ. ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಳ್ಳುವ ಮೊದಲೇ ಈ ಹಿಟ್ಗಳನ್ನು ತ್ರಿವಿಕ್ರಮ್ ನೀಡಿದ್ದರು. ಆದರೆ ಈಗ ಅಲ್ಲು ಅರ್ಜುನ್, ತ್ರಿವಿಕ್ರಮ್ ಶ್ರೀನಿವಾಸ್ಗೆ ಕೈಕೊಟ್ಟಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಅದೂ ಒಂದಲ್ಲ ಎರಡೆರಡು ಭಾರಿ.
ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಹೊಸ ಸಿನಿಮಾನಲ್ಲಿ ಅಲ್ಲು ಅರ್ಜುನ್ ನಟಿಸಬೇಕಿತ್ತು. ‘ಪುಷ್ಪ’ ಸಿನಿಮಾದ ಸಮಯದಲ್ಲಿಯೇ ಈ ಬಗ್ಗೆ ಚರ್ಚೆಗಳು ನಡೆದಿದ್ದವು. ‘ಪುಷ್ಪ 2’ ಬಳಿಕ ಅಲ್ಲು ಅರ್ಜುನ್, ತ್ರಿವಿಕ್ರಮ್ ಶ್ರೀನಿವಾಸ್ ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಅಲ್ಲು ಅರ್ಜುನ್ ಅಟ್ಲಿ ನಿರ್ದೇಶನದ ಸಿನಿಮಾಕ್ಕೆ ಎಸ್ ಹೇಳಿದರು. ಆ ಬಳಿಕ ತ್ರಿವಿಕ್ರಮ್ ಅವರು ಅದೇ ಕತೆಯನ್ನು ಜೂ ಎನ್ಟಿಆರ್ ಅವರಿಗೆ ಹೇಳಿದರು. ಆದರೆ ಜೂ ಎನ್ಟಿಆರ್ ಕತೆ ಸೂಟ್ ಆಗುವುದಿಲ್ಲವೆಂದು ನಿರ್ಧರಿಸಿ ಮತ್ತೆ ಕತೆಯನ್ನು ಅಲ್ಲು ಅರ್ಜುನ್ ಅವರಿಗೇ ಒಪ್ಪಿಸಿದರು ತ್ರಿವಿಕ್ರಮ್ ಶ್ರೀನಿವಾಸ್.
For More Updates Join our WhatsApp Group :




