ಹುಬ್ಬಳ್ಳಿ: ಪ್ರಯಾಣಿಕ ದಟ್ಟಣೆ ಹಾಗೂ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ಎಸ್.ಎಂ.ವಿ.ಟಿ ಬೆಂಗಳೂರು ನಿಲ್ದಾಣದಿಂದ ಬೆಳಗಾವಿ, ವಿಜಯಪುರ ಹಾಗೂ ಹುಬ್ಬಳ್ಳಿ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು ಓಡಿಸಲು ನಿರ್ಧರಿಸಿದೆ.
ರೈಲು ಸಂಖ್ಯೆ 06551: ಎಸ್.ಎಂ.ವಿ.ಟಿ. ಬೆಂಗಳೂರು – ಬೆಳಗಾವಿ ಎಕ್ಸ್ಪ್ರೆಸ್ ವಿಶೇಷ ರೈಲು ಆಗಸ್ಟ್ 7, 9, 14 ಮತ್ತು 16ರ ಸಂಜೆ 07:00 ಗಂಟೆಗೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 08:25ಕ್ಕೆ ಬೆಳಗಾವಿ ತಲುಪಲಿದೆ.
ರೈಲು ಸಂಖ್ಯೆ 06552: ಬೆಳಗಾವಿ – ಎಸ್.ಎಂ.ವಿ.ಟಿ. ಬೆಂಗಳೂರು ಎಕ್ಸ್ಪ್ರೆಸ್ ವಿಶೇಷ ರೈಲು ಆಗಸ್ಟ್ 8, 10, 15 ಮತ್ತು 17ರ ಸಂಜೆ 05:30ಕ್ಕೆ ಬೆಳಗಾವಿಯಿಂದ ಹೊರಟು ಮರುದಿನ ಬೆಳಿಗ್ಗೆ 05:00 ಗಂಟೆಗೆ ಎಸ್.ಎಂ.ವಿ.ಟಿ. ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.
ಎಲ್ಲೆಲ್ಲಿ ನಿಲುಗಡೆ?: ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್.ಎಂ.ಎಂ. ಹಾವೇರಿ, ಎಸ್.ಎಸ್.ಎಸ್. ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರ.
ಈ ರೈಲು ಎರಡು ಎ.ಸಿ.2 ಟಯರ್ ಕೋಚ್ಗಳು, ಮೂರು ಎಸಿ 3-ಟಯರ್ ಕೋಚ್ಗಳು, ಹತ್ತು ಸ್ಲೀಪರ್ ದರ್ಜೆಯ ಕೋಚ್ಗಳು, ಮೂರು ದ್ವಿತೀಯ ದರ್ಜೆಯ ಕೋಚ್ಗಳು ಮತ್ತು ಎರಡು ಲಗೇಜ್-ಕಂ-ಬ್ರೇಕ್ ವ್ಯಾನ್ಗಳನ್ನು ಹೊಂದಿರಲಿದೆ.
ಹುಬ್ಬಳ್ಳಿ–ಬೆಂಗಳೂರು ನಡುವೆ ವಿಶೇಷ ರೈಲು: ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ಸರಿದೂಗಿಸಲು ನೈರುತ್ಯ ರೈಲ್ವೆಯು ಎಸ್.ಎಸ್.ಎಸ್. ಹುಬ್ಬಳ್ಳಿ ಮತ್ತು ಎಸ್.ಎಂ.ವಿ.ಟಿ.ಬೆಂಗಳೂರು ಹಾಗೂ ಎಸ್.ಎಂ.ವಿ.ಟಿ. ಬೆಂಗಳೂರು ಮತ್ತು ವಿಜಯಪುರ ನಡುವೆ ವಿಶೇಷ ರೈಲು ಓಡಿಸಲಿದೆ.
ರೈಲು ಸಂಖ್ಯೆ 07375: ಈ ವಿಶೇಷ ರೈಲು ಆಗಸ್ಟ್ 14ರಂದು ಬೆಳಿಗ್ಗೆ 11 ಗಂಟೆಗೆ ಎಸ್.ಎಸ್.ಎಸ್. ಹುಬ್ಬಳ್ಳಿ ನಿಲ್ದಾಣದಿಂದ ಹೊರಡಲಿದ್ದು, ಅದೇ ದಿನ ರಾತ್ರಿ 07.45 ಗಂಟೆಗೆ ಎಸ್.ಎಂ.ವಿ.ಟಿ. ಬೆಂಗಳೂರು ನಿಲ್ದಾಣ ತಲುಪಲಿದೆ. ಮಾರ್ಗ ಮಧ್ಯೆ ಎಸ್.ಎಂ.ಎಂ. ಹಾವೇರಿ, ಹರಿಹರ, ದಾವಣಗೆರೆ, ಅರಸೀಕೆರೆ ಮತ್ತು ತುಮಕೂರು ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆಯಾಗಲಿದೆ.
ಈ ರೈಲು ಒಂದು ಫಸ್ಟ್ ಎ.ಸಿ. ಕಂ ಎ.ಸಿ. 2-ಟಯರ್ ಕೋಚ್, ಒಂದು ಎ.ಸಿ. 2-ಟಯರ್ ಕೋಚ್, ಮೂರು ಎ.ಸಿ. 3-ಟಯರ್ ಕೋಚ್, ಎಂಟು ಸ್ಲೀಪರ್ ದರ್ಜೆಯ ಕೋಚ್, ಐದು ದ್ವಿತೀಯ ದರ್ಜೆಯ ಕೋಚ್ ಮತ್ತು ಎರಡು ಲಗೇಜ್-ಕಂ-ಬ್ರೇಕ್ ವ್ಯಾನ್ಗಳನ್ನು ಹೊಂದಿರಲಿದೆ.
ಬೆಂಗಳೂರು – ವಿಜಯಪುರ ಮಧ್ಯೆ ಈ ರೈಲು:
ರೈಲು ಸಂಖ್ಯೆ 06589: ಎಸ್.ಎಂ.ವಿ.ಟಿ. ಬೆಂಗಳೂರಿಂದ ಆಗಸ್ಟ್ 14ರ ರಾತ್ರಿ 9 ಗಂಟೆಗೆ ಹೊರಡಲಿದ್ದು ಮರುದಿನ ಬೆಳಿಗ್ಗೆ 10.45 ಗಂಟೆಗೆ ವಿಜಯಪುರ ತಲುಪಲಿದೆ.
ರೈಲು ಸಂಖ್ಯೆ 06590: ಇದು ವಿಜಯಪುರ ರೈಲು ನಿಲ್ದಾಣದಿಂದ ಆಗಸ್ಟ್ 17 ರಂದು ಸಂಜೆ 5.30 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 8.10ಕ್ಕೆ ಎಸ್.ಎಂ.ವಿ.ಟಿ.ಬೆಂಗಳೂರು ನಿಲ್ದಾಣವನ್ನು ತಲುಪಲಿದೆ. ಮಾರ್ಗದಲ್ಲಿ ಈ ರೈಲು ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಎಸ್.ಎಂ.ಎಂ.ಹಾವೇರಿ, ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ನಿಲ್ದಾಣಗಳಲ್ಲಿ ನಿಲುಗಡೆಯನ್ನು ನೀಡಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.