ಚಿತ್ರರಂಗದಲ್ಲಿ ಗಣ್ಯ ವ್ಯಕ್ತಿಗಳ ಅನೇಕ ಬಯೋಪಿಕ್ಗಳು ತಯಾರಾಗಿವೆ. ಜೀವನ ಚರಿತ್ರೆ ಸಿನಿಮಾಗಳಿಗೆ ಆ ನಾಯಕರ ಪಾತ್ರವನ್ನು ನಿಭಾಯಿಸುವ ಕಲಾವಿದರು ಕೂಡಾ ಅಷ್ಟೇ ಮುಖ್ಯ. ಪಾತ್ರಕ್ಕೆ ತಕ್ಕ ನಟ , ನಟಿಯರನ್ನು ಹುಡುಕುವುದು ದೊಡ್ಡ ಸವಾಲಾಗಿರುತ್ತದೆ. ಕನ್ನಡದಲ್ಲಿ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಯೋಪಿಕ್ ತಯಾರಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಯೋಪಿಕ್ಗಾಗಿ ತಯಾರಿ ನಡೆಯುತ್ತಲೇ ಇದೆ. ಸತ್ಯ ರತ್ನಂ ಈ ಚಿತ್ರವನ್ನು ನಿರ್ದೇಶಿಸಲು ಹೊರಟಿದ್ದು ಸಿನಿಮಾ 2 ಭಾಗಗಳಲ್ಲಿ ತಯಾರಾಗಲಿದೆ. ಹಯಾತ್ ಪೀರಾ, ಚನ್ನಪ್ಪ ಹಳಾಲಿ ಹಾಗೂ ಸಂಗಡಿಗರು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಚಿತ್ರತಂಡ ಎಲ್ಲಾ ತಯಾರಿ ನಡೆಸಿದ್ದು ಸಿನಿಮಾ ಶೂಟಿಂಗ್ ಇದೇ ತಿಂಗಳಿಂದ ಆರಂಭವಾಗಲಿದೆ.
ಆದರೆ ಸಿದ್ದರಾಮಯ್ಯ ಬಯೋಪಿಕ್ನಲ್ಲಿ ಅವರ ಪಾತ್ರ ಮಾಡುವುದು ಯಾರ ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ. ತಮಿಳು ಖ್ಯಾತ ನಟ ವಿಜಯ್ ಸೇತುಪತಿ, ಸಿದ್ದರಾಮಯ್ಯ ಪಾತ್ರ ಮಾಡಲಿದ್ದಾರೆ ಎಂಬ ಮಾತು ಕೇಳಿಬಂದಿದ್ದರೂ ಚಿತ್ರತಂಡ ಮಾತ್ರ ಈ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.
ಸಿದ್ದರಾಮಯ್ಯ ಲಾಯರ್ ಆಗಿ ವೃತ್ತಿ ಜೀವನ ಆರಂಭಿಸಿದವರು. ಪುಟ್ಟ ಹಳ್ಳಿಯೊಂದರಲ್ಲಿ ಹುಟ್ಟಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗುವ ನಡುವೆ ಅವರ ಜರ್ನಿ ಹೇಗಿತ್ತು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗುತ್ತಿದೆ. ಚಿತ್ರತಂಡ ಈಗಾಗಲೇ ವಿಜಯ್ ಸೇತುಪತಿ ಜೊತೆ ಮಾತನಾಡಿದ್ದು, ಅವರೂ ಕೂಡಾ ಈ ಬಯೋಪಿಕ್ನಲ್ಲಿ ನಟಿಸಲು ಒಪ್ಪಿದ್ದಾರಂತೆ. ಆದರೆ ಡೇಟ್ಸ್ ಸಿಗದ ಕಾರಣ ಚಿತ್ರತಂಡ ಇನ್ನೂ ಕಾಯುತ್ತಲೇ ಇದೆ. ಬಹುಶ: ಶೂಟಿಂಗ್ ನಿಗದಿತ ಸಮಯಕ್ಕೆ ಆರಂಭವಾಗಿ, ವಿಜಯ್ ಸೇತುಪತಿ ತಡವಾಗಿ ಚಿತ್ರತಂಡ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
Facebook: https://www.facebook.com/PragathiTV/
Pragati TV Social Connect for more latest u