ಈ ದೇವಾಲಯ ಬಾಗಿಲು ತೆರೆಯುವುದು ರಕ್ಷಾ ಬಂಧನ ದಿನ ಮಾತ್ರ..? ಯಾಕೆ ಗೊತ್ತಾ..?

Bansi Narayan Temple

Bansi Narayan Temple

ಉತ್ತರಾಖಂಡ: ಬಾನ್ಸಿ ನಾರಾಯಣ ದೇವಾಲಯವು ಹಿಮಾಲಯದ ಮಡಿಲಲ್ಲಿರುವ ದೇವಾಲಯವಾಗಿದ್ದು, ತನ್ನ ವೈಶಿಷ್ಟ್ಯದಿಂದಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ರಕ್ಷಾಬಂಧನದ ದಿನದಂದು ವರ್ಷಕ್ಕೊಮ್ಮೆ ಮಾತ್ರ ಈ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಈ ಕಾರಣಕ್ಕಾಗಿ ಇದು ನಿಗೂಢ ಮತ್ತು ಪವಿತ್ರ ತೀರ್ಥಯಾತ್ರೆ ಎಂದು ಪರಿಗಣಿಸಲಾಗಿದೆ. ಈ ದಿನ ಇಲ್ಲಿ ವಿಶೇಷ ಪೂಜೆಗಳು ಮತ್ತು ಕಾರ್ಯಕ್ರಮಗಳು ನಡೆಯುತ್ತವೆ.

ಈ ದಿನ ಇಲ್ಲಿಗೆ ಬಂದು ಪೂಜಿಸುವುದು ವಿಶೇಷವಾಗಿ ಮಂಗಳಕರವೆಂದು ನಂಬಲಾಗಿದೆ ಮತ್ತು ಈ ದಿನವು ಭಗವಾನ್ ವಿಷ್ಣುವಿನ ವಿಶೇಷ ಅನುಗ್ರಹವನ್ನು ಪಡೆಯುವುದು ತುಂಬಾ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಇಲ್ಲಿ ಮಾಡುವ ಪೂಜೆ ಮತ್ತು ದರ್ಶನವು ವಿಶೇಷ ಧಾರ್ಮಿಕ ಮಹತ್ವವನ್ನು ಹೊಂದಿದೆ ಎಂದು ನಂಬಲಾಗಿದೆ. ರಕ್ಷಾಬಂಧನದ ದಿನದಂದು ಇಲ್ಲಿ ದರ್ಶನಕ್ಕಾಗಿ ಭಕ್ತಾದಿಗಳು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ.

ಉತ್ತರಾಖಂಡದ ಚಮೋಲಿ ಜಿಲ್ಲೆಯ ಉರ್ಗಾಮ್ ಕಣಿವೆಯಲ್ಲಿರುವ ಬಾನ್ಸಿ ನಾರಾಯಣ ದೇವಾಲಯವು ಶ್ರೀಮನ್ನಾರಾಯಣನಿಗೆ ಸಮರ್ಪಿತವಾಗಿದೆ, ಆದರೆ ಈ ದೇವಾಲಯದಲ್ಲಿ ಭಗವಾನ್ ಶಿವ ಮತ್ತು ಭಗವಾನ್ ನಾರಾಯಣ (ಶ್ರೀ ಕೃಷ್ಣ) ಇಬ್ಬರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಈ ದೇವಾಲಯವನ್ನು ಬಾನ್ಸಿ ನಾರಾಯಣ (ಶಿವ) ಮತ್ತು ಬಾನ್ಸಿ ನಾರಾಯಣ (ಶ್ರೀಕೃಷ್ಣ) ದೇವಾಲಯ ಎಂದು ಕರೆಯಲಾಗುತ್ತದೆ.

ಒಳಗಿನಿಂದ ಈ ದೇವಾಲಯದ ಎತ್ತರ ಕೇವಲ 10 ಅಡಿ ಎತ್ತರ ಹೊಂದಿದೆ. ಇಲ್ಲಿನ ಅರ್ಚಕರು ಪ್ರತಿ ವರ್ಷ ರಕ್ಷಾಬಂಧನದಂದು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ದೇವಾಲಯದ ಬಳಿ ಕರಡಿ ಗುಹೆಯೂ ಇದೆ, ಈ ಗುಹೆಯಲ್ಲಿ ಭಕ್ತರು ಪ್ರಸಾದವನ್ನು ಮಾಡುತ್ತಾರೆ. ರಕ್ಷಾಬಂಧನದ ದಿನದಂದು ಈ ಊರಿನಿಂದ ಪ್ರತಿ ಮನೆಯಿಂದಲೂ ಬೆಣ್ಣೆಯನ್ನು ತಂದು ಅದನ್ನು ಪ್ರಸಾದದಲ್ಲಿ ಸೇರಿಸಿ ದೇವರಿಗೆ ಅರ್ಪಿಸಲಾಗುತ್ತದೆ.

ಈ ದೇವಾಲಯವು ನೈಸರ್ಗಿಕ ಸೌಂದರ್ಯದಿಂದ ಆವೃತವಾಗಿದೆ, ಮಾನವ ವಾಸಸ್ಥಳದಿಂದ ಬಹು ದೂರದಲ್ಲಿದೆ ಮತ್ತು ಪರ್ವತಗಳ ಸುಂದರ ನೋಟಗಳು ನಯನಮನೋಹರವಾಗಿ ಗೋಚರಿಸುತ್ತವೆ. ಈ ದೇವಾಲಯವನ್ನು ತಲುಪಲು ದಟ್ಟವಾದ ಓಕ್ ಕಾಡುಗಳ ಮೂಲಕ ಹೋಗಬೇಕು. ಈ ದೇವಾಲಯವನ್ನು ಸುಮಾರು 6 ರಿಂದ 8 ನೇ ಶತಮಾನದ ಮಧ್ಯೆ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.

ರಕ್ಷಾಬಂಧನದ ದಿನದಂದು ಬಾನ್ಸಿ ನಾರಾಯಣ ದೇವಸ್ಥಾನದಲ್ಲಿ ಸಹೋದರರಿಗೆ ರಾಖಿ ಕಟ್ಟುವ ಸಹೋದರಿಯರು ಸಂತೋಷ, ಸಮೃದ್ಧಿ ಮತ್ತು ಯಶಸ್ಸಿನ ಆಶೀರ್ವಾದವನ್ನು ಪಡೆಯುತ್ತಾರೆ ಮತ್ತು ಅವರ ಸಹೋದರರು ತಮಗೆ ಎದುರಾಗುವ ಎಲ್ಲಾ ತೊಂದರೆಗಳು ಮತ್ತು ಆತಂಕಗಳು/ಪೀಡೆಗಳನ್ನು ತೊಡೆದುಹಾಕುತ್ತಾರೆ ಎಂಬ ಕುತೂಹಲಕಾರಿ ನಂಬಿಕೆಯು ಈ ದೇವಾಲಯದಲ್ಲಿದೆ. ಹಾಗಾಗಿ ರಕ್ಷಾಬಂಧನದ ದಿನ ಇಲ್ಲಿ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಈ ದಿನ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಪೂಜೆಯ ನಂತರ ಪ್ರಸಾದ ವಿತರಣೆ. ಸಂಜೆ ಸೂರ್ಯ ಮುಳುಗುತ್ತಿದ್ದಂತೆ, ಮುಂದಿನ ರಕ್ಷಾಬಂಧನದವರೆಗೆ ದೇವಾಲಯದ ಬಾಗಿಲುಗಳನ್ನು ಮತ್ತೆ ಮುಚ್ಚಲಾಗುತ್ತದೆ.

ಬಾನ್ಸಿ ನಾರಾಯಣ ದೇವಾಲಯಕ್ಕೆ ಸಂಬಂಧಿಸಿದ ಒಂದು ಪೌರಾಣಿಕ ಕಥೆಯಿದೆ. ಈ ಕಥೆಯ ಪ್ರಕಾರ, ವಿಷ್ಣುವು ತನ್ನ ವಾಮನ ಅವತಾರದಿಂದ ಮುಕ್ತವಾದ ನಂತರ ಇಲ್ಲಿ ಕಾಣಿಸಿಕೊಂಡಿದ್ದಾನೆ. ಈ ಸ್ಥಳದಲ್ಲಿ ದೇವಋಷಿ ನಾರದರು ಭಗವಾನ್ ನಾರಾಯಣನನ್ನು ಪೂಜಿಸಿದರು ಎಂದು ನಂಬಲಾಗಿದೆ. ನಾರದರು ವರ್ಷದ 364 ದಿನಗಳ ಕಾಲ ಇಲ್ಲಿ ಭಗವಾನ್ ವಿಷ್ಣುವನ್ನು ಪೂಜಿಸಿ, ಹೋಗಿದ್ದಾರೆ. ಆದ್ದರಿಂದ ಭಕ್ತರು ಇಲ್ಲಿ ನಾರಾಯಣನನ್ನು ಪೂಜಿಸಬಹುದು. ಈ ಕಾರಣಕ್ಕಾಗಿ, ಈ ದೇವಾಲಯದ ಬಾಗಿಲು ವರ್ಷಕ್ಕೊಮ್ಮೆ ಮಾತ್ರ ರಕ್ಷಾಬಂಧನದ ದಿನದಂದು ತೆರೆಯುತ್ತದೆ.

Leave a Reply

Your email address will not be published. Required fields are marked *