ಕೊರಟಗೆಯಲ್ಲಿ ಹಾಡುಹಗಲೆ ಚಿನ್ನಾಭರಣ ಕಳ್ಳತನ..!

ಕೊರಟಗೆರೆ :- ಹಾಡುಹಗಲೆ ಚಾಣಾಕ್ಷಿ ಕಳ್ಳರು ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಮನೆಯ ಹೊರ ಭಾಗದಲ್ಲಿ ಇಡಲಾದ ಬೀಗವನ್ನು ತೆಗೆದು ಬೀರು ಹೊಡೆದು 11ಲಕ್ಷ ಮೌಲ್ಯದ ನಗದು 60 ಗ್ರಾಂ ಚಿನ್ನಾಭರಣ ದೋಚಿರುವ ಘಟನೆ ಕೊರಟಗೆರೆ ಗಡಿಭಾಗ ಕೊಡಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಕೊರಟಗೆರೆ ಹಾಗೂ ಕೊಡಿಗೆನಹಳ್ಳಿ ಗಡಿಭಾಗ ಸಿಂಗರಗೊoಡನಹಳ್ಳಿ ಗ್ರಾಮದ ಪ್ರಕೃದೀನ್ ಎಂಬವರ ಮನೆಯಲ್ಲಿ ಕಳ್ಳತನ ಜರುಗಿದ್ದು, ಗುರುವಾರ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆ ಮಧ್ಯ ಭಾಗದಲ್ಲಿ ಕಳ್ಳತನ ಪ್ರಕ್ರಿಯೆ ಜರಗಿರಬಹುದು ಎನ್ನಲಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕಳ್ಳರು ಮನೆಯ ಬೀಗದಕ್ಕಿ ಪಕ್ಕದ ರೂಮಲ್ಲಿ ಇಡುವುದನ್ನು ಗಮನಿಸಿ ಬೀಗ ತೆಗೆದು ಬೀರು ಹೊಡೆದು ತಮ್ಮ ಕೈಚಳಕ ತೋರಿಸಿದ್ದಾರೆ ಎನ್ನಲಾಗಿದೆ.

ಯುವಕ

ಪ್ರಕೃದೀನ್ ಹೆಂಡತಿ ಕಿಡ್ನಿ ವಿಫಲವಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು , ಗಂಡ ಪ್ರಕೃಧೀನ್ ಜಮೀನಿನಲ್ಲಿ ಕೆಲಸಕ್ಕೆ ಹೋದ ಸಂದರ್ಭ ಗಮನಿಸಿ ಮನೆಯ ಪ್ರಮುಖ ಭಾಗಲಿನ ಕೀ ಪಕ್ಕದ ರೂಮ್ನಲ್ಲಿ ಇಡುವುದನ್ನು ಗಮನಿಸಿ ಬೀಗದ ಕ್ಕೀ ತೆಗೆದು ಒಳಹೊಕ್ಕು ನೀರಿನ ಬೀಗ ಹೊಡೆದು 11 ಹಾಗೂ 60 ಗ್ರಾಂ ಚಿನ್ನಾಭರಣ ದೋಚಿ ಸಿನಿಮಿಯ ರೀತಿಯಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಫಕ್ರುದ್ದೀನ್ ದನಗಳನ್ನು ಕೊಡು -ಕೊಳ್ಳುವ ವ್ಯಾಪಾರಸ್ಥನಾಗಿದ್ದು, ವ್ಯಾಪಾರದ ಹಣ ಹಾಗೂ ಮಡದಿಯ ಕಿಡ್ಡಿ ಶಸ್ತç ಚಿಕಿತ್ಸೆ ಗೆಂದು ಮೀಸಲಿಟ್ಟ ಹಣವನ್ನ ಕಳ್ಳರು ದೋಚಿ ಪರಾರಿ ಆಗಿದ್ದಾರೆ ಎನ್ನಲಾಗಿದೆ.

ಈ ಸಂಬ0ಧ ಕೊಡಗಿನಲ್ಲಿ ಪಿಎಸ್‌ಐ ಶ್ರೀನಿವಾಸ್, ಎಎಸ್‌ಐ ಖಾನ್, ಮುಖ್ಯಪೇದೆ ಜಯರಾಮ್ ವೇದಿಗಳಾದ ಮಂಜುನಾಥ್, ನಾರಾಯಣಸ್ವಾಮಿ ಸ್ಥಳ ಪರಿಶೀಲನೆ ನಡೆಸಿದ್ದು, ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚುದಾರರು ಆಗಮಿಸುತ್ತಿದ್ದು, ಪೊಲೀಸ್ ಇಲಾಖೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Pragati TV Social Connect for more latest u

Leave a Reply

Your email address will not be published. Required fields are marked *