ತಿಪಟೂರು ಶಾಸಕ ಬಿ ಸಿ ನಾಗೇಶ್ಗೆ ಬಿಎಸ್ವೈ ಪುತ್ರ ಕೊಟ್ಟ ಬಿಗ್ ಶಾಕ್..!

ತುಮಕೂರು : ಶಿಕ್ಷಣ ಸಚಿವ ಮತ್ತು ತಿಪಟೂರು ಶಾಸಕ ಬಿ ಸಿ ನಾಗೇಶ್ಗೆ ಬಿಎಸ್ವೈ ಪುತ್ರ ಬಿಗ್ ಶಾಕ್ ನೀಡಿದ್ದಾರೆ. ಸಿಎಂ ಸಮ್ಮುಖದಲ್ಲೇ ವಿಜಯೇಂದ್ರ ಮಾತು ಕೇಳಿ ನಾಗೇಶ್ ಅವಕ್ಕಾಗಿದ್ದಾರೆ.

ಹೌದು,,, ತಿಪಟೂರಿನ ಸಿದ್ದರಾಮೇಶ್ವರರ ಜಯಂತಿಯಲ್ಲಿ ಬಿಎಸ್ವೈ ಪುತ್ರ ವಿಜಯೇಂದ್ರ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಬಿ.ವೈ.ವಿಜಯೇಂದ್ರ ಭಾಷಣ ಮಾಡಲು ಬಂದಾಗ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಈ ವೇಳೆ ಹರ್ಷೋದ್ಘಾರ ಕೇಳಿ ಗಲಾಟೆ ಮಾಡಬೇಡಿ ಎಂದು ವಿಜಯೇಂದ್ರ ಮನವಿ ಮಾಡಿದ್ರು.

ನಿಮ್ಮ ಈ ಅಭಿಮಾನ, ಹರ್ಷೋದ್ಘಾರ, ಗಲಾಟೆ ನೋಡ್ತಾ ಇದ್ರೆ ಬಿ.ಸಿ.ನಾಗೇಶ್ರನ್ನು ಸೈಡಿಗೆ ಸರಿಸಿ ನಾನು ಇಲ್ಲೇ ಚುನಾವಣೆಗೆ ನಿಲ್ಲಬೇಕಾಗುತ್ತದೆ ಎಂದು ವಿಜಯೇಂದ್ರ ಹೇಳಿದ್ರು,  ಈ ಮಾತು ಕೇಳಿ ಮತ್ತಷ್ಟು ಜೋರು ಜೈಕಾರ ಹಾಕಿದ್ರು ವಿಜಯೇಂದ್ರ ಅಭಿಮಾನಿಗಳು.

ಕಾರ್ಯಕ್ರಮದಲ್ಲಿ ಈ ಮಾತನ್ನು ವಿಜಯೇಂದ್ರ ತಮಾಷೆಗಾಗಿ ಹೇಳಿದ್ರ ಅಥವಾ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಿಪಟೂರಿನಿಂದಲೇ ಸ್ಪರ್ಧೆ ಮಾಡುತ್ತಾರ ಕಾದು ನೋಡಬೇಕಿದೆ.

Pragati TV Social Connect for more latest u

Leave a Reply

Your email address will not be published. Required fields are marked *