ತುಮಕೂರು || ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎದುರಾಯ್ತು ಮತ್ತೊಂದು ಮುಜುಗರ..?

ತುಮಕೂರು : ಗುತ್ತಿಗೆದಾರನೊಬ್ನ ನಾನು ಸಾವಿಗೀಡಾಗುತ್ತಿದ್ದೇನೆ ಎಂಬ ವೀಡಿಯೋ ಹೇಳಿಕೆ ಹರಿಬಿಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ವಿಶ್ವೇಶ್ವರಯ್ಯ ಜಲ ನಿಗಮ ಅಧಿಕಾರಿಯಿಂದ ಗುತ್ತಿಗೆದಾರನಿಗೆ ದೌರ್ಜನ್ಯ ಆರೋಪ ಕೇಳಿಬಂದಿದೆ.
ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಡಿಕೊಂಡಿರುವ ವೀಡಿಯೋ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ.

ತುಮಕೂರು ಜಿಲ್ಲೆ ಪಾವಗಡದ ಜಿನ್ನೆನಹಳ್ಳಿ ಗ್ರಾಮದ 1 ನೇ ದರ್ಜೆ ಗುತ್ತಿಗೆದಾರ ಸುಜೀತ್ ವಿಡಿಯೋ ಮಾಡಿಕೊಂಡಿರುವ ಗುತ್ತಿಗೆದಾರನಾಗಿದ್ದಾನೆ. ವಿಡಿಯೋ‌ದಲ್ಲಿ ನಾನು ಸಾವಿಗೀಡಾಗುತ್ತಿದ್ದೇನೆ ಎಂದು ಅಧಿಕಾರಿ‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ಸಾವಿಗೆ ವಿಶ್ವೇಶ್ವರಯ್ಯ ಜಲ ನಿಗಮ ಎಂ.ಡಿ ಸಣ್ಣಚಿತ್ತಯ್ಯ ಕಾರಣ ಎಂದು‌ ಆರೋಪಿಸಿದ್ದಾರೆ. ವಿಶ್ವೇಶ್ವರಯ್ಯ ಜಲ ನಿಗಮದಲ್ಲಿ ಎಸ್ ಸಿ ಪಿ ಕಾಮಗಾರಿ ಮಾಡಿದ್ದ ಸುಜೀತ್ ಈಗ ಆತ್ಮ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿದ್ದಾರೆ.

ಎಂ ಡಿ ಸಣ್ಣಚಿತ್ತಯ್ಯ ಕಾಮಗಾರಿಯ ಬಿಲ್ ಕ್ಲಿಯರ್ ಮಾಡಲು ಮೀನಾಮೇಷ ಎಣಿಸುತ್ತಿದ್ದ ಆರೋಪ ಕೇಳಿಬಂದಿದೆ. ಎಂಜಿನಿಯರ್, ಎಇಇ ಎಲ್ಲಾ ಹಂತದ ಅಧಿಕಾರಿಗಳು ಸಹಿ ಮಾಡಿದ್ದರೂ ತನಿಖೆಯ ನೆಪ ಹೇಳುತ್ತಿರುವ ಎಂಡಿ ಎಂದು ದೂರಿದ್ದಾರೆ.

ತನಿಖೆಯಲ್ಲೂ ಓಕೆ ಆಗಿದೆ…ಆದರೂ ಹಣ ಹಾಕಿಲ್ಲ. ಒಬ್ಬ ಎಸ್ಸಿ ಕಂಟ್ರಾಕ್ಟರ್ ಬೆಳಿಬಾರ್ದು, ತುಳಿಯಬೇಕು ಎಂದು ಈ ರೀತಿ ಮಾಡುತ್ತಿದ್ದಾರೆ ಅವಲೊತ್ತುಕೊಂಡಿದ್ದಾರೆ ಗುತ್ತಿಗೆದಾರ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *