ಮಧುಗಿರಿ : ಕಾಂತರಾಜ್ ಆಯೋಗದ ಜಾತಿ ಗಣತಿ ವರದಿಯು ಇನ್ನೂ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ. ಆದರೂ ಕೆಲವರು ವರದಿಯ ಬಗ್ಗೆ ವಿನಾಕಾರಣ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.
![ಯುವಕ](http://pragatitv.in/wp-content/uploads/2022/09/JEENI_ADD_WEB-1024x576.jpg)
ಅವರು ಪಟ್ಟಣದ ಕಸಾಪ ಭವನದಲ್ಲಿ ಆಯೋಜಿಸಿದ್ದ ಕನಕ ಜಯಂತಿಯಲ್ಲಿ ಮಾತನಾಡಿದರು. 200 ಕೋಟಿ ರೂ. ಸರ್ಕಾರ ವೆಚ್ಚ ಮಾಡಿ ಜಾತಿ ಗಣತಿ ನಡೆಸಿದೆ. ವರದಿಯನ್ನು ಸ್ವೀಕರಿಸಿದ ನಂತರ ವರದಿಯ ಬಗ್ಗೆ ಚರ್ಚಿಸಿ ಪರಿಶೀಲಿಸಲಾಗುವುದು.
ಆದರೆ ಆ ವರದಿ ಇನ್ನೂ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ. ಸಲ್ಲಿಕೆಯಾದ ನಂತರ ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಲಾಗುವುದು. ಸಾರ್ವಜನಿಕರಿಂದ ಸಾಧಕ-ಬಾಧÀಕಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುವುದು. ವರದಿಯು ಸಾರ್ವಜನಿಕರ ಪರವಾಗಿ ಇಲ್ಲದೆ ಹೋದರೆ ತಿರಸ್ಕರಿಸಲಾಗುವುದು ಎಂದು ತಿಳಿಸಿದರು.
Pragati TV Social Connect for more latest u