Tumkur | ಕಾಂತರಾಜ್ ವರದಿ ಬಗ್ಗೆ ಟೀಕೆ ಬೇಡ : ಕೆ.ಎನ್‌.ರಾಜಣ್ಣ

ಮಧುಗಿರಿ : ಕಾಂತರಾಜ್ ಆಯೋಗದ  ಜಾತಿ ಗಣತಿ ವರದಿಯು ಇನ್ನೂ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ. ಆದರೂ ಕೆಲವರು ವರದಿಯ ಬಗ್ಗೆ ವಿನಾಕಾರಣ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.

ಯುವಕ

 ಅವರು ಪಟ್ಟಣದ ಕಸಾಪ ಭವನದಲ್ಲಿ ಆಯೋಜಿಸಿದ್ದ ಕನಕ ಜಯಂತಿಯಲ್ಲಿ ಮಾತನಾಡಿದರು.  200 ಕೋಟಿ ರೂ. ಸರ್ಕಾರ ವೆಚ್ಚ ಮಾಡಿ ಜಾತಿ ಗಣತಿ ನಡೆಸಿದೆ. ವರದಿಯನ್ನು ಸ್ವೀಕರಿಸಿದ ನಂತರ ವರದಿಯ ಬಗ್ಗೆ ಚರ್ಚಿಸಿ ಪರಿಶೀಲಿಸಲಾಗುವುದು.

ಆದರೆ ಆ ವರದಿ ಇನ್ನೂ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ. ಸಲ್ಲಿಕೆಯಾದ ನಂತರ ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಲಾಗುವುದು.   ಸಾರ್ವಜನಿಕರಿಂದ ಸಾಧಕ-ಬಾಧÀಕಗಳ ಬಗ್ಗೆ  ಅಭಿಪ್ರಾಯ ಸಂಗ್ರಹಿಸಲಾಗುವುದು. ವರದಿಯು ಸಾರ್ವಜನಿಕರ ಪರವಾಗಿ ಇಲ್ಲದೆ ಹೋದರೆ ತಿರಸ್ಕರಿಸಲಾಗುವುದು ಎಂದು ತಿಳಿಸಿದರು.

Pragati TV Social Connect for more latest u

Leave a Reply

Your email address will not be published. Required fields are marked *