ತುಮಕೂರು || ಲೋಕಾಯುಕ್ತ ಬಲೆಗೆ ಸರ್ಕಾರಿ ವೈದ್ಯ

ತುರುವೇಕೆರೆ : ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಹರಿಪ್ರಸಾದ್ ಅವರು ೩ಸಾವಿರ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ತುಮಕೂರಿನ ಹನುಮಂತಪ್ಪ ಎಂಬುವವರು ತಮ್ಮ ಸಂಬAಧಿ ಅಂಕಿತಾ ಅವರನ್ನು ಹೆರಿಗೆಗಾಗಿ ಡಿ.೧೯ ರಂದು ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದರು. ಹೆರಿಗೆಯ ನಂತರ ವೈದ್ಯ ಡಾ.ಹರಿಪ್ರಸಾದ್ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ಹನುಮಂತಪ್ಪ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ೩ ಸಾವಿರ ಲಂಚ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ದಾಳಿ ನಡೆಸಿ ಆರೋಪಿ ವೈದ್ಯನನ್ನು ವಶಕ್ಕೆ ಪಡೆದಿದ್ದಾರೆ.

ದಾಳಿಯಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ರಾಮರೆಡ್ಡಿ, ಸಲೀಂ ಅಹಮದ್, ಶಿವರುದ್ರಪ್ಪ ಮೇಟಿ ಹಾಗೂ ಮತ್ತಿತರ ಸಿಬ್ಬಂದಿ ಇದ್ದರು.

Pragati TV Social Connect for more latest u

One thought on “ತುಮಕೂರು || ಲೋಕಾಯುಕ್ತ ಬಲೆಗೆ ಸರ್ಕಾರಿ ವೈದ್ಯ

Leave a Reply

Your email address will not be published. Required fields are marked *