ತುಮಕೂರು || ಡಿ.ಜೆ ವಿಚಾರವಾಗಿ ಗಲಭೆ: ಚಾಕುವಿನಿಂದ ಇಬ್ಬರಿಗೆ ಇರಿತ

ತುಮಕೂರು: ಶಿರಾ ತಾಲ್ಲೂಕಿನ ಭೂವನಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಸಮಯದಲ್ಲಿ ಡಿ.ಜೆ ವಿಚಾರವಾಗಿ ಉಂಟಾದ ಜಗಳದಲ್ಲಿ ಚಿಕ್ಕಣ್ಣ ಹಾಗೂ ಗೋವಿಂದರಾಜು ಎಂಬುವರಿಗೆ ಚಾಕುವಿನಿಂದ ಇರಿಯಲಾಗಿದೆ.

ಶ್ರೀಕೃಷ್ಣ ಜನ್ಮಾಷ್ಟಮಿಯ ಮೆರವಣಿಗೆಯ ಸಮಯದಲ್ಲಿ ಡಿ.ಜೆ ಹಾಕಿಕೊಂಡು ಕುಣಿಯುತ್ತಿದ್ದು ಅಲ್ಲಿಗೆ ಬಂದ ಗೋವಿಂದರಾಜು ಎಂಬುವರು ತನಗೆ ಬೇಕಾದ ಹಾಡನ್ನು ಹಾಕುವಂತೆ ಹೇಳಿದ್ದಾರೆ. ಅವರ ಮಾತಿಗೆ ಮನ್ನಣೆ ಸಿಗದ ಹಿನ್ನೆಲೆಯಲ್ಲಿ ಡಿಜೆಯನ್ನು ಸ್ಥಗಿತಗೊಳಿಸಲು ಮುಂದಾದ ಸಮಯದಲ್ಲಿ ಅಲ್ಲಿದ್ದ ಯುವಕರ ಜೊತೆ ಮಾತಿನ ಚಕಮುಕಿ ನಡೆದಿದೆ. ಈ ಸಮಯದಲ್ಲಿ ಯುವಕರು ಗೋವಿಂದರಾಜು ಮೇಲೆ ಹಲ್ಲೆ‌ ನಡೆಸಿದ್ದಾರೆ.

ಮನೆಗೆ ತೆರಳಿದ ಗೋವಿಂದರಾಜು ಚಾಕು ತೆಗೆದುಕೊಂಡು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಗಲಾಟೆ ಮಾಡಿದ್ದಾರೆ. ಈ ಸಮಯದಲ್ಲಿ ರೊಚ್ಚಿಗೆದ್ದ ಗೋವಿಂದರಾಜು  ಚಾಕುವಿನಿಂದ ಚಿಕ್ಕಣ್ಣ ಹಾಗೂ ಮತ್ತೊಬ್ಬರಾದ ಗೋವಿಂದರಾಜು ಅವರಿಗೆ ಇರಿದಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಚಿಕ್ಕಣ್ಣ ಅವರನ್ನು ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋವಿಂದರಾಜು ಅವರಿಗೆ ಶಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಶಿರಾ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Pragati TV Social Connect for more latest u

Leave a Reply

Your email address will not be published. Required fields are marked *