ತುಮಕೂರು : ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಎಸ್ಬಿಐ ಎಟಿಎಂ ಧ್ವಂಸಗೊಳಿಸಿರುವ ಘಟನೆ ತುಮಕೂರಿನ ತುರುವೇಕೆರೆಯಲ್ಲಿ ನಡೆದಿದೆ. ನಶೆಯ ಅಮಲಿನಲ್ಲಿದ್ದ ವಡಿವೇಲು ಸ್ವಾಮಿ ಎಂಬಾತ, ಎಟಿಎಂಗೆ ತೆರಳಿದ್ದ. ಈ ವೇಳೆ ಆತ ಹಣ ಡ್ರಾ ಮಾಡಲು ಯತ್ನಿಸಿದಾಗ, ದುಡ್ಡು ಬಂದಿರಲಿಲ್ಲ. ಹೀಗಾಗಿ ರೊಚ್ಚಿಗೆದ್ದ ವಡಿವೇಲು ಸ್ವಾಮಿ, ಕಲ್ಲಿನಿಂದ ಹೊಡೆದು ಎಟಿಎಂ ಧ್ವಂಸಗೊಳಿಸಿದ್ದ. ನವೆಂಬರ್ 27ರ ರಾತ್ರಿ ಘಟನೆ ನಡೆದಿತ್ತು.
ಸ್ಥಳೀಯರ ದೂರಿನ ಅನ್ವಯ ಇದು ಕಳ್ಳತನ ಆಗಿರಬಹುದೆಂದು ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಕುಡುಕ ಮಹಾಶಯನ ಕೃತ್ಯ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ಸಿಸಿಟಿವಿ ಪರಿಶೀಲನೆ ವೇಳೆ ಕುಡುಕನ ಹುಚ್ಚಾಟ ಬಯಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
For More Updates Join our WhatsApp Group :
