ಉಪರಾಷ್ಟ್ರಪತಿ ರಾಧಾಕೃಷ್ಣನ್ ಲಿಂಗೈಕ್ಯ ಶ್ರೀ ಶಿವಕುಮಾರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಉಪರಾಷ್ಟ್ರಪತಿ ರಾಧಾಕೃಷ್ಣನ್ ಲಿಂಗೈಕ್ಯ ಶ್ರೀ ಶಿವಕುಮಾರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಸಂಸ್ಮರಣೋತ್ಸವ  ಕಾರ್ಯಕ್ರಮ ಉದ್ಘಾಟನೆ ಮಾಡಿದ  ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್

ತುಮಕೂರು : ಶ್ರೀ ಶಿವಕುಮಾರ ಸ್ವಾಮೀಜಿಯವರ 7ನೇ ವರ್ಷದ ಪುಣ್ಯಸ್ಮರಣೋತ್ಸವ ಅದ್ದೂರಿಯಾಗಿ ನಡೆದಿದ್ದು, ಕಾರ್ಯಕ್ರಮವನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಉದ್ಘಾಟಿಸಿದ್ದಾರೆ.ವಿಶೇಷ ಪೂಜೆ ಮತ್ತು ಪುಷ್ಪಾರ್ಚನೆ ಸಿದ್ದಗಂಗಾ ಮಠದಲ್ಲಿ ಭಾವಚಿತ್ರಕ್ಕೆ ನಮನ.

ಉಪರಾಷ್ಟ್ರಪತಿ ಮೊದಲೇ ಸಿದ್ದಗಂಗಾ ಮಠದಲ್ಲಿರುವ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ನಂತರ ಲೀಂಗೈಕ್ಯ ಶ್ರೀ ಶಿವಕುಮಾರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ ಶಿರಬಾಗಿ ನಮಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿರಾಧಾಕೃಷ್ಣನ್ ಒಂದು ಗಂಟೆಯ ಕಾಲ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಈ ವೇಳೆ ರಾಜ್ಯಪಾಲಥಾವರ್ಚಂದ್ಗೆಹ್ಲೋಟ್, ಸದ್ಗುರುಮಧುಸೂದನ್ಸಾಯಿ,ಕೇಂದ್ರಸಚಿವವಿ. ಸೋಮಣ್ಣ, ಗೃಹಮತ್ತುಜಿಲ್ಲಾಉಸ್ತುವಾರಿಸಚಿವಡಾ. ಜಿ. ಪರಮೇಶ್ವರ್, ಸಂಸದಡಾ. ಮಂಜುನಾಥ್, ಗೋವಿಂದಕಾರಜೋಳ ಸೇರಿದಂತೆ ಇತರ ಶಾಸಕರು ಭಕ್ತ ಮತ್ತು ಭಕ್ತಾದಿಗಳು ಸುಮಾರು 15–20 ಸಾವಿರ ಭಕ್ತರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಸುಮಾರು 15–20 ಸಾವಿರ ಭಕ್ತಾದಿಗಳು ಪಾಲ್ಗೊಂಡು ಪುಣ್ಯಸ್ಮರಣೋತ್ಸವವನ್ನು ವೈಭವೋಪೇತವಾಗಿ ಅನುಭವಿಸಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *