ನವದೆಹಲಿ: ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ದಿನವೇ, ಇಂಡಿ ಅಲೈಯನ್ಸ್ನ ಅಭ್ಯರ್ಥಿ ಮತ್ತು ಮಾಜಿ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ವಿರುದ್ಧ ಎಂಟು ಮಂದಿ ನಿವೃತ್ತ ನ್ಯಾಯಮೂರ್ತಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದರ್ಶನ್ ರೆಡ್ಡಿ ಅವರು ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದರ ಬಗ್ಗೆ ಗಂಭೀರ ತೀವ್ರ ಅಭಿಪ್ರಾಯ ವ್ಯಕ್ತವಾಗಿದೆ.
ಲಾಲು ಭೇಟಿ ಯಾಕೆ ವಿವಾದ?
ಬಿಹಾರದಲ್ಲಿ ₹940 ಕೋಟಿ ಮೇವು ಹಗರಣದಲ್ಲಿ ತಪ್ಪಿತಸ್ಥರಾದ ಲಾಲು ಪ್ರಸಾದ್ ಯಾದವ್ ಅವರು:
- ಸಂಸತ್ ಸದಸ್ಯರಲ್ಲ
- ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತ ಹಾಕಲು ಅರ್ಹರಲ್ಲ
ಹೀಗಿರುವಾಗಲೂ, ಸುದರ್ಶನ್ ರೆಡ್ಡಿಯವರು ಅವರನ್ನು ಭೇಟಿಯಾಗಿದ್ದು “ಅನುಚಿತ ಮತ್ತು ನೈತಿಕವಾಗಿ ಪ್ರಶ್ನಾರ್ಹ“ ಎಂದು ನಿವೃತ್ತ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
“ಇದು ನಿಷ್ಠೆಗೆ ಧಕ್ಕೆ” — ನ್ಯಾಯಮೂರ್ತಿಗಳ ಅಭಿಪ್ರಾಯ
“ಚುನಾವಣೆಯ ನೆಪದಲ್ಲಿ ಭ್ರಷ್ಟಾಚಾರದ ಕಾರಣ ಶಿಕ್ಷೆಯಾದ ವ್ಯಕ್ತಿಯ ಜೊತೆಗೆ ಶಿಷ್ಟಾಚಾರ ವೈಖರಿ ತೋರುವುದೇ ತಪ್ಪು,” ಎಂದು ನ್ಯಾಯಮೂರ್ತಿಗಳು ಹೇಳಿದ್ದು, ಈ ಭೇಟಿ ಅವರ ನೈತಿಕತೆ ಹಾಗೂ ಉದ್ದೇಶಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತಿದೆ ಎಂದು ಹೇಳಿದ್ದಾರೆ.
ಆಕ್ರೋಶ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳ ಪಟ್ಟಿ:
- ಜಸ್ಟಿಸ್ ಎಸ್ಎಂ ಖಂಡೇಪಾರ್ಕರ್ (ಬಾಂಬೆ ಹೈಕೋರ್ಟ್)
- ಜಸ್ಟಿಸ್ ಅಂಬಾದಾಸ್ ಜೋಶಿ (ಬಾಂಬೆ ಹೈಕೋರ್ಟ್)
- ಜಸ್ಟಿಸ್ ಆರ್ಕೆ ಮಾರ್ಥಿಯಾ (ಜಾರ್ಖಂಡ್ ಹೈಕೋರ್ಟ್)
- ಜಸ್ಟಿಸ್ ದೇವೇಂದ್ರ ಕುಮಾರ್ ಅಹುಜಾ (ಅಲಹಾಬಾದ್ ಹೈಕೋರ್ಟ್)
- ಜಸ್ಟಿಸ್ ಎಸ್ಎನ್ ಧಿಂಗ್ರಾ (ದೆಹಲಿ ಹೈಕೋರ್ಟ್)
- ಜಸ್ಟಿಸ್ ಕರಮ್ ಚಂದ್ ಪುರಿ (ಪಂಜಾಬ್-ಹರಿಯಾಣ ಹೈಕೋರ್ಟ್)
- ಜಸ್ಟಿಸ್ ಪಿಎನ್ ರವೀಂದ್ರನ್ (ಕೇರಳ ಹೈಕೋರ್ಟ್)
- ಜಸ್ಟಿಸ್ ಆರ್ಎಸ್ ರಾಥೋಡ್ (ರಾಜಸ್ಥಾನ ಹೈಕೋರ್ಟ್)
ಪ್ರಶ್ನೆಗಳ ವಟ್ಟಣೆಯಲ್ಲಿ ಬಿ. ಸುದರ್ಶನ್
ಇಂಡಿ ಅಲೈಯನ್ಸ್ ಅಭ್ಯರ್ಥಿಯಾಗಿ ಸುದರ್ಶನ್ ರೆಡ್ಡಿ ಹೆಸರು ಪ್ರಕಟವಾಗಿದ್ದರಿಂದಲೇ ರಾಜಕೀಯವಾಗಿ ಚರ್ಚೆಗೆ ಗ್ರಾಸರಾಗಿದ್ದರು. ಆದರೆ ಈಗ ಲಾಲು ಯಾದವ್ ಅವರನ್ನು ಭೇಟಿಯಾದ ನಂತರ, ಅವರ ನಿಷ್ಠೆ ಹಾಗೂ ನಿರ್ವಹಣೆಯ ಮೇಲೆ ಮತದಾರರು, ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವಲಯದಿಂದ ಆತಂಕ ವ್ಯಕ್ತವಾಗಿದೆ.
For More Updates Join our WhatsApp Group :