Rahul Gandhi ನೇತೃತ್ವದ ಪ್ರತಿಭಟನಾ ಸಮಾವೇಶ ಮುಂದೂಡಲ್ಪಟ್ಟಿದ್ದಕ್ಕೆ ವಿಷಾದಿಸಿದ DK Sivakumar.

Rahul Gandhi ನೇತೃತ್ವದ ಪ್ರತಿಭಟನಾ ಸಮಾವೇಶ ಮುಂದೂಡಲ್ಪಟ್ಟಿದ್ದಕ್ಕೆ ವಿಷಾದಿಸಿದ DK Sivakumar.

ಬೆಂಗಳೂರು: ನಾಳೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್​ನಲ್ಲಿ ನಡೆಯಬೇಕಿದ್ದ ಪ್ರತಿಭಟನಾ ಸಮಾವೇಶ 8ನೇ ತಾರೀಖಿನವರರೆಗೆ ಮುಂದೂಡುವಂತಾಗಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿಷಾದ ವ್ಯಕ್ತಪಡಿಸಿದರು. ಪತ್ರಿಕಾ ಗೋಷ್ಠಿ ನಡೆಸಿ ಮಾತಾಡಿದ ಅವರು, ಜಾರ್ಖಂಡ್ ಮುಕ್ತಿ ಮೋರ್ಚಾದ ಸಂಸ್ಥಾಪಕ ಮತ್ತು ಜಾರ್ಖಂಡ್​ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳಲು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ನಾಳೆ ತೆರಳುತ್ತಿರುವುದರಿಂದ 5 ನೇ ತಾರೀಖು ನಿಗದಿಯಾಗಿದ್ದ ಪ್ರತಿಭಟನಾ ಸಮಾವೇಶವನ್ನು ಮುಂದೂಡುವುದು ಅನಿವಾರ್ಯವಾಗಿದೆ.

ಸೊರೇನ್ ಇಂಡಿಯ ಬ್ಲಾಕ್​ನ ಪ್ರಮುಖ ಸದಸ್ಯರಾಗಿದ್ದರು, ಕಾಂಗ್ರೆಸ್ ನೊಂದಿಗೆ ಅವರ ಬಾಂಧವ್ಯಕ್ಕೆ ದಶಕಗಳ ಇತಿಹಾಸವಿದೆ, ಕಾಂಗ್ರೆಸ್ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಅನಾನುಕೂಲವಾಗಿದೆ, ಅದರೆ ಸ್ಥಿತಿಯ ಬೇಡಿಕೆ ಹಾಗಿದೆ, ಬೇರೇನೂ ಮಾಡಲಾಗಲ್ಲ ಎಂದು ಶಿವಕುಮಾರ್ ಹೇಳಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *