ಮಂಗಳೂರು – ಧರ್ಮಸ್ಥಳದ ನಿಕಟ ಪ್ರದೇಶದಲ್ಲಿ ಶವ ಹೂತ ಪ್ರಕರಣ ಮತ್ತೊಮ್ಮೆ ಚರ್ಚೆಗೆ ಎಳೆಯಲಾಗಿದೆ. ಈ ಪ್ರಕರಣದ ಕುರಿತು ಮಹತ್ವದ ನ್ಯಾಯಾಂಗ ಬೆಳವಣಿಗೆಯೊಂದಿಗೆ, ಕರ್ನಾಟಕ ಹೈಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿದ ರಿಟ್ ಅರ್ಜಿ ವಿಚಾರಣೆಗೆ ಸಮ್ಮತಿ ನೀಡಿದೆ.
ಎಸ್ಐಟಿಗೆ ಹೈಕೋರ್ಟ್ ನೋಟೀಸ್
ಸ್ಥಳೀಯರು ಪುರಂದರ ಗೌಡ ಮತ್ತು ತುಕಾರಾಮ್ ಗೌಡ ಎಂಬ ಎರಡು ಮಂದಿ, ಧರ್ಮಸ್ಥಳದ ಸಮೀಪ ನೇತ್ರಾವತಿ ಕಾಡಿನಲ್ಲಿ ಚಿನ್ನಯ್ಯ ಎಂಬ ವ್ಯಕ್ತಿಯ ಶವವನ್ನು ಹೂಳುತ್ತಿರುವ ದೃಶ್ಯವನ್ನು ನೋಡಿದ್ದೇವೆ ಎಂದು ಎಸ್ಐಟಿಗೆ ಮಾಹಿತಿ ನೀಡಿದ್ದರು. ಆದರೆ ಈ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷಿಸಿದ ಎಸ್ಐಟಿ ವಿರುದ್ಧ, ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎನ್. ನಾಗಪ್ರಸನ್ನ ಅವರ ಪೀಠ, ಅರ್ಜಿಯನ್ನು ಪರಿಗಣಿಸಿ SITಗೆ ನೋಟೀಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆ ಗುರುವಾರ ನಡೆಯಲಿದೆ.
ಉತ್ಖನನಕ್ಕೆ ಹೊಸ ಅವಕಾಶ?
ಅರ್ಜಿದಾರರು ತಮ್ಮ ಮನವಿಯಲ್ಲಿ,
- ಶವ ಹೂತ ಸ್ಥಳವನ್ನು ತಕ್ಷಣ ಗುರುತಿಸಿ ಉತ್ಖನನ ನಡೆಸಬೇಕು,
- ತನಿಖೆ ಪ್ರಾಮಾಣಿಕವಾಗಿರಲಿ ಎಂಬ ನಿಟ್ಟಿನಲ್ಲಿ ಕೋರ್ಟ್ ಕಮಿಷನರ್ ಅಥವಾ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಯಲಿ,
- ಮತ್ತು ತನಿಖೆಯ ಪ್ರತೀ ಹಂತವನ್ನು ಕೋರ್ಟ್ಗೆ ವರದಿ ಮಾಡಬೇಕು ಎಂದು ತಿಳಿಸಿದ್ದಾರೆ.
ಸರ್ಕಾರದ ಪ್ರತಿನಿಧಿಯಿಂದ ಸ್ಪಂದನೆ ನಿರೀಕ್ಷೆ
ಸರ್ಕಾರದ ಪರ ವಿಶೇಷ ಸಾರ್ವಜನಿಕ ಅಭಿಯೋಜಕ ಬಿ.ಎನ್. ಜಗದೀಶ್, ಹೈಕೋರ್ಟ್ ನೋಟೀಸ್ ಸ್ವೀಕರಿಸಿದ್ದು, ಗುರುವಾರದೊಳಗೆ ಕೋರ್ಟ್ಗೆ ಉತ್ತರ ನೀಡುವ ಸಾಧ್ಯತೆ ಇದೆ.
ಎಸ್ಐಟಿ ತನಿಖೆ ಬಗ್ಗೆ ಮತ್ತೆ ಕೇಳುಬರುವ ಪ್ರಶ್ನೆಗಳು:
- ಸಾಕ್ಷಿದಾರರ ಹೇಳಿಕೆ ನಿರ್ಲಕ್ಷಿಸಲಾಗಿದೆ ಎಂಬ ಆರೋಪ ಎಷ್ಟು ಸತ್ಯ?
- ಶವ ಹೂತ ಸ್ಥಳದಲ್ಲಿ ಉತ್ಖನನ ನಡೆಯಿದರೆ, ಹೊಸ ಮಾಹಿತಿ ಲಭಿಸುವ ಸಾಧ್ಯತೆ ಇದೆಯೆ?
- ಈ ತನಿಖೆ ರಾಜಕೀಯವಾಗಿ ಪ್ರಭಾವಿತವಾಗಿದೆಯೆ?
For More Updates Join our WhatsApp Group :




