ಕಾಂತಾರ ಚಾಪ್ಟರ್ 1’ ಗೆ ರಾಜ್ ಅಥವಾ ರಕ್ಷಿತ್ ಸಹಾಯ ಮಾಡಿಲ್ಲ: ರಿಷಬ್ ಶೆಟ್ಟಿ ಸ್ಪಷ್ಟನೆ.

ಕಾಂತಾರ ಚಾಪ್ಟರ್ 1’ ಗೆ ರಾಜ್ ಅಥವಾ ರಕ್ಷಿತ್ ಸಹಾಯ ಮಾಡಿಲ್ಲ: ರಿಷಬ್ ಶೆಟ್ಟಿ ಸ್ಪಷ್ಟನೆ.

ಬೆಂಗಳೂರು: ಬಹು ನಿರೀಕ್ಷಿತ ಕಾಂತಾರ: ಚಾಪ್ಟರ್ 1’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಸ್ಯಾಂಡಲ್ವುಡ್ ಮಾತ್ರವಲ್ಲದೆ ಇಡೀ ಭಾರತದಲ್ಲೇ ಸದ್ದು ಮಾಡುತ್ತಿದೆ. ಈ ನಡುವೆ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಚಿತ್ರ ಸಂಬಂಧಿತ ಕೆಲವು ಪ್ರಮುಖ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

ರಾಜ್ ಮತ್ತು ರಕ್ಷಿತ್ ಸಹಾಯ ಮಾಡಿದ್ದಾರೆನಾ?

‘ಕಾಂತಾರ’ ಮೊದಲ ಭಾಗದಲ್ಲಿ ರಾಜ್ ಬಿ ಶೆಟ್ಟಿ ಅವರು ಕ್ಲೈಮ್ಯಾಕ್ಸ್ ಬರವಣಿಗೆಯಲ್ಲಿ ಸಹಾಯ ಮಾಡಿದ್ದಾರೋ ನಿಜ. ಆದರೆ ಚಾಪ್ಟರ್ 1′ ನಲ್ಲಿ ಅವರು ಅಥವಾ ರಕ್ಷಿತ್ ಶೆಟ್ಟಿ ಯಾವ ಸಹಕಾರವೂ ನೀಡಿಲ್ಲವೆಂದು ರಿಷಬ್ ಶೆಟ್ಟಿ ತಿಳಿಸಿದ್ದಾರೆ.

“ಇವರಿಬ್ಬರೂ ತಮ್ಮದೇ ಆದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರಿಂದ ಈ ಚಿತ್ರದ ಬರವಣಿಗೆಯಲ್ಲಿ ಭಾಗವಹಿಸಲಿಲ್ಲ,”
ಎಂದು ರಿಷಬ್ ಸ್ಪಷ್ಟನೆ ನೀಡಿದರು.

ಯಾರು ಇದ್ದರು ಬರವಣಿಗೆಯಲ್ಲಿ?

ಈ ಬಾರಿ, ‘ಸು ಫ್ರಮ್ ಸೋ’ ಖ್ಯಾತಿಯ ಶನೀಲ್, ಚಾಪ್ಟರ್ 1 ಚಿತ್ರದಲ್ಲಿ ರಿಷಬ್‌ಗೆ ಬರವಣಿಗೆಯಲ್ಲಿ ಸಹಕರಿಸಿದ್ದಾರೆ.

ಹಾಗೇ, ‘ಸು ಫ್ರಮ್ ಸೋ’ ಸಿನಿಮಾ ಬ್ಲಾಕ್‌ಬಸ್ಟರ್ ಆದಾಗ, ರಿಷಬ್ ಶೆಟ್ಟಿ, ರಾಜ್ ಶೆಟ್ಟಿ ಮತ್ತು ತಂಡಕ್ಕೆ ಕರೆಮಾಡಿ ಅಭಿನಂದನೆ ಸಲ್ಲಿಸಿದ್ದರೊಂದಿಗೆ, ಚಿತ್ರ ಕಲೆಕ್ಷನ್ ಬಗ್ಗೆ ವಿಶೇಷ ಆಸಕ್ತಿ ತೋರಿಸಿದ್ದರನ್ನೂ ಮೂಲಗಳು ತಿಳಿಸಿವೆ.

ಚಿತ್ರ ಬಿಡುಗಡೆಗೂ ಮುನ್ನ ಎಚ್ಚರಿಕೆ?

ಚಿತ್ರ ರಿಲೀಸ್‌ಗೆ ದಿನಗಳು ಕಡಿಮೆಯಾಗುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ “ಯಾರು ಈ ಚಿತ್ರದಲ್ಲಿ ಕೈಜೋಡಿಸಿದ್ದಾರೆ?” ಎಂಬ ಚರ್ಚೆಗಳಿಗೆ ರಿಷಬ್ ಶೆಟ್ಟಿ ಈ ಮೂಲಕ ತೆರೆ ಬಿದ್ದಂತಾಗಿದೆ. ಈಗ ರಾಜ್ ಬಿ ಶೆಟ್ಟಿ ಈ ಚಿತ್ರ ನೋಡಿ ಏನು ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *