“ಗಿಫ್ಟ್ ಆಗಿ ಸಿಕ್ಕಿದ್ದ ಬೈಕ್‌ಗೆ ಕೋಪದಲ್ಲಿ ಬೆಂ*: ಸಾಲ ಸಿಗದ ದುಃಖದಲ್ಲಿ ಯುವಕನ ಕೃತ್ಯ!”

 “ಗಿಫ್ಟ್ ಆಗಿ ಸಿಕ್ಕಿದ್ದ ಬೈಕ್‌ಗೆ ಕೋಪದಲ್ಲಿ ಬೆಂ*: ಸಾಲ ಸಿಗದ ದುಃಖದಲ್ಲಿ ಯುವಕನ ಕೃತ್ಯ!”

ಬೆಂಗಳೂರು: ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಬೈಕ್ ಗೆ ಬೆಂಕಿ ಇಟ್ಟ ಘಟನೆ ನಡೆದಿದ್ದು, ಆರೋಪಿ ಯಶವಂತ್ನನ್ನು ಬಸವೇಶ್ವರ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನ ವಿಚಾರಣೆ ನಡೆಸಿದಾಗ ಸಾಲ ಸಿಗದ ಕಾರಣ ಈ ಕೃತ್ಯ ಎಸಗಿರುವುದಾಗಿ ಹೇಳಿದ್ದಾನೆ.

ಯಶವಂತ್‌ಗೆ ಗಿಫ್ಟ್‌ ಆಗಿ ಸಿಕ್ಕಿದ ಬೈಕ್ ಅನ್ನು ಕೋಪದಿಂದ ತಾನೇ ಸುಟ್ಟುಹಾಕಿದ ಶಂಕೆ ವ್ಯಕ್ತವಾಗುತ್ತಿದೆ. ಈತ ನಡು ರಸ್ತೆಯಲ್ಲಿ ಬೈಕ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾನೆ. ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದರೂ, ಬೈಕ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬಸವೇಶ್ವರನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪರಾರಿಯಾಗಿರುವ ಆರೋಪಿ ಯಶವಂತ್‌ಗಾಗಿ ಹುಡುಕಾಟ ಮುಂದುವರಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *