ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿ ಜೈಲಿನಲ್ಲಿ ಇರುವ ನಟ ದರ್ಶನ್, ಕೋರ್ಟ್ ಆದೇಶವಿದ್ದರೂ ಕೂಡ ಜೈಲು ಅಧಿಕಾರಿಗಳು ಅವಶ್ಯಕ ಸೌಲಭ್ಯ ಒದಗಿಸುತ್ತಿಲ್ಲ ಎಂದು ಮತ್ತೆ ನ್ಯಾಯಾಲಯದ ಶರಣಾಗಿದ್ದಾರೆ. ದಿಂಬು, ಹಾಸಿಗೆ ಮತ್ತು ಬೆಡ್ಶೀಟ್ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.
ಏನು ಸೌಲಭ್ಯ ಬೇಡಿಕೆ ಇತ್ತು?
- ಹೆಚ್ಚುವರಿ ದಿಂಬು (Pillow)
- ಹಾಸಿಗೆ (Mattress)
- ಬೆಡ್ಶೀಟ್ (Bed Sheet)
- ಜೈಲು ಆವರಣದಲ್ಲಿ ವಾಕಿಂಗ್ಗೆ ಅವಕಾಶ
ಈ ಬೇಡಿಕೆಗಳನ್ನು ಪೂರೈಸುವಂತೆ ಬೆಂಗಳೂರು 57ನೇ ಸಿಸಿಹೆಚ್ ನ್ಯಾಯಾಲಯ ಪೂರ್ವದಲ್ಲಿ ಆದೇಶ ನೀಡಿತ್ತು, ಆದರೆ ಜೈಲು ಅಧಿಕಾರಿಗಳು ಅದನ್ನು ನಿರ್ಲಕ್ಷಿಸಿದ್ದಾರೆ ಎಂದು ದರ್ಶನ್ ಪರ ವಕೀಲರು ಆರೋಪಿಸಿದ್ದಾರೆ.
‘ಹಿಂದಿನ ಸ್ಥಿತಿಯೇ ಮುಂದುವರೆದಿದೆ’ – ದರ್ಶನ್ ವದಂತಿ
“ಬೆಳಿಗ್ಗೆ ಮತ್ತು ಸಂಜೆ ಅರ್ಧಗಂಟೆ ವಾಕಿಂಗ್ ಮಾತ್ರ ಸಿಗುತ್ತದೆ. ಬೇರೆ ಯಾವುದೆ ಸೌಲಭ್ಯ ಇಲ್ಲ. ಕೋರ್ಟ್ ಆದೇಶದ ನಡುವೆಯೂ, ಬೇಡಿದ ಹಾಸಿಗೆ, ದಿಂಬು, ಬೆಡ್ಶೀಟ್ ನೀಡಿಲ್ಲ. ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ” ಎಂದು ದರ್ಶನ್ ಪರ ವಕೀಲರು ಕೋರ್ಟ್ ಮುಂದೆ ತಿಳಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ
ಕೋರ್ಟ್ ಆದೇಶ ಉಲ್ಲಂಘನೆ ಮಾಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ದರ್ಶನ್ ಪರ ವಕೀಲರು ನ್ಯಾಯಾಲಯದಲ್ಲಿ ಆಗ್ರಹಿಸಿದ್ದಾರೆ. ಈ ಸಂಬಂಧ ಕೋರ್ಟ್ನಲ್ಲಿ ಮತ್ತೊಂದು ಹೊಸ ಅರ್ಜಿ ಸಲ್ಲಿಸಲಾಗಿದೆ.
For More Updates Join our WhatsApp Group :
