ಪವಿತ್ರಾ ಗೌಡಗೆ ದೊಡ್ಡ ನಿರಾಸೆ: ಜಾಮೀನು ಅರ್ಜಿ ಕೆಳಹಂತದ ನ್ಯಾಯಾಲಯದಿಂದ ವಜಾ. |Pavithra Gowda

ಪವಿತ್ರಾ ಗೌಡಗೆ ದೊಡ್ಡ ನಿರಾಸೆ: ಜಾಮೀನು ಅರ್ಜಿ ಕೆಳಹಂತದ ನ್ಯಾಯಾಲಯದಿಂದ ವಜಾ. |Pavithra Gowda

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪವಿತ್ರಾ ಗೌಡಗೆ ನ್ಯಾಯಾಲಯದಿಂದ ನಿರಾಸೆ ಎದುರಾಗಿದೆ. ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 57ನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಐಪಿ ನಾಯಕ್ ವಜಾ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ

 ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಮಂದಿ ಆರೋಪಿಗಳು ಈ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಸುಪ್ರೀಂ ಕೋರ್ಟ್ ಈಗಾಗಲೇ ಎಲ್ಲ ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಪ್ರಸ್ತುತ ಎಲ್ಲ ಆರೋಪಿಗಳು ಬೆಂಗಳೂರು ಪರಪ್ಪನ ಅಗ್ರಹಾರ ಜೈಲುದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪವಿತ್ರಾ ಗೌಡ ಅವರ ವಾದಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪವಿತ್ರಾ ಗೌಡ, “ನನ್ನಿಂದ ರೇಣುಕಾ ಸ್ವಾಮಿ ನಿಧನ ಹೊಂದಿಲ್ಲ.”  “ನಾನು ಮಹಿಳೆ, ಸಿಂಗಲ್ ಮದರ್. ಮಗಳ ಆರೈಕೆ ಮಾಡಲು ಹೊರಗೆ ಬರಬೇಕಿದೆ.”ಎಂಬ ಕಾರಣಗಳನ್ನು ನೀಡಿದ್ದರು. ಆದರೆ ನ್ಯಾಯಾಲಯವು ಈ ಕಾರಣಗಳನ್ನು ಪರಿಗಣಿಸದೆ ಅರ್ಜಿಯನ್ನು ತಿರಸ್ಕರಿಸಿದೆ.

ಮುಂದೇನು?

ಪವಿತ್ರಾ ಗೌಡ ಈಗ ಹೈಕೋರ್ಟ್‌ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಇಲ್ಲದಿದ್ದರೆ, 14 ದಿನಗಳ ಬಳಿಕ ಮತ್ತೆ ಕೆಳಹಂತದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *