ನ. ಒಳಗೆ ಎಲ್ಲಾ ಬಾಕಿ ವಾಹನ ನೋಂದಣಿ ಅರ್ಜಿಗಳನ್ನು ಪೂರ್ಣಗೊಳಿಸಿ: RTOಗಳಿಗೆ ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಆದೇಶ.

ನ. ಒಳಗೆ ಎಲ್ಲಾ ಬಾಕಿ ವಾಹನ ನೋಂದಣಿ ಅರ್ಜಿಗಳನ್ನು ಪೂರ್ಣಗೊಳಿಸಿ: RTOಗಳಿಗೆ ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಆದೇಶ.

ಬೆಂಗಳೂರು: ರಾಜ್ಯದಲ್ಲಿ ಬಾಕಿಯಿರುವ ಎಲ್ಲಾ ವಾಹನ ನೋದಣಿ ಅರ್ಜಿಗಳನ್ನು ಪೂರ್ಣಗೊಳಿಸುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆರ್ಟಿಓ  ಗಳಿಗೆ ಸೂಚನೆ ನೀಡಿದ್ದಾರೆ. ಗುರುವಾರ (ನ.13)ದಂದು ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಸಾಕಷ್ಟು ನೋಂದಣಿ ಹರ್ಜಿಗಳು ಬಾಕಿ ಇವೆ. ಅದರ ಜೊತೆಗೆ ಶೇ. 50 ರಷ್ಟು ಹೊಸ ನೋಂದಣಿಅರ್ಜಿಗಳು ಸಲ್ಲಿಕೆಯಾಗಿವೆ. ನವೆಂಬರ್ 30ರೊಳಗೆ ಈ ಎಲ್ಲಾ ಅಜಿರ್ಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸಬೇಕು ಎಂದರು. ಅರ್ಜಿಗಳ ಡಿಜಿಟಲೀಕರಣದಲ್ಲಿ ಕೆಲವು ಸಾಫ್ಟ್ ವೇರ್ ದೋಷಗಳು ಎದುರಾಗಿದ್ದು, ಇಲಾಖೆ ಆ ದೋಷಗಳನ್ನು ಸರಿಪಡಿಸುವ ಪ್ರಯತ್ನದಲ್ಲಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಸುರಕ್ಷತೆಗೆ ಹೆಚ್ಚಿನ ಕ್ರಮ ವಹಿಸಲು ಸೂಚನೆ

ಫಿಟ್ನೆಸ್ ಪ್ರಮಾಣಪತ್ರ ನೀಡುವ ಸಂದರ್ಭದಲ್ಲಿ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲನ್ನು ಅಳವಡಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಲೋಕಲ್ ಬಸ್ ಆಗಿರಲಿ, ಐಷಾರಾಮಿ ಬಸ್ ಆಗಿರಲಿ ತುರ್ತು ನಿರ್ಗಮನದ ಬಾಗಿಲು ಕಡ್ಡಾಯವಾಗಿದೆ. ಹಲವಾರು ಬಸ್​​ಗಳಲ್ಲಿ ಕೇವಲ ತುರ್ತು ನಿರ್ಗಮದ ಕಿಟಕಿಗಳು ಮಾತ್ರವಿದ್ದು, ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ಇದರಿಂದ ತೊಂದರೆಯಾಗಬಹುದು. ಹೀಗಾಗಿ ತುರ್ತು ಬಾಗಿಲು ಅತ್ಯಗತ್ಯ. ವಾಹನ ಯಾವಾಗಲಾದರೂ ನೋಂದಣಿಯಾಗಿರಲಿ, ನಮ್ಮ ರಾಜ್ಯದಲ್ಲಿ ಕಾರ್ಯನಿರ್ವಹಿಸಲು ನಮ್ಮ ನೀತಿ ನಿಯಮಗಳಿಗೆ ಬದ್ಧರಾಗಿರಲೇಬೇಕು ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದು, ಸಾರ್ವಜನಿಕ ಸಾರಿಗೆಗಳಲ್ಲಿ ಅತಿಯಾದ ವಾಣಿಜ್ಯ ವಸ್ತುಗಳ ಸಾಗಾಟ ಕಂಡುಬಂದಲ್ಲಿ ಇಲಾಖೆಯು ಕಠಿಣ ಕ್ರಮ ಕೈಗೊಳ್ಳುವಂತೆಯೂ ಆದೇಶಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *