“ದಸರಾ ನಾಡಹಬ್ಬ, ಎಲ್ಲ ಸಮುದಾಯಗಳಿಗೂ ಸೇರಿರುವ ಹಬ್ಬ” – ಮೈಸೂರಿನಲ್ಲಿ ಪ್ರತಿಕ್ರಿಯೆ ಮುಖ್ಯಮಂತ್ರಿ ಸಿದ್ದರಾಮಯ್ಯ

"ದಸರಾ ನಾಡಹಬ್ಬ, ಎಲ್ಲ ಸಮುದಾಯಗಳಿಗೂ ಸೇರಿರುವ ಹಬ್ಬ" - ಮೈಸೂರಿನಲ್ಲಿ ಪ್ರತಿಕ್ರಿಯೆ ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ಮೈಸೂರು ದಸರಾ 2025 ಉದ್ಘಾಟನೆಗೆ ಕವಿ ಬಾನು ಮುಷ್ತಾಕ್ರನ್ನು ಆಯ್ಕೆ ಮಾಡಿರುವ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಉಪಜಾತೀಯ ಹಾಗೂ ರಾಜಕೀಯ ತಿಕ್ಕಾಟ ಜೋರಾಗುತ್ತಿದ್ದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೊನೆಗೂ ಮೌನ ಮುರಿದಿದ್ದಾರೆ.

“ದಸರಾ ಎಲ್ಲರ ಹಬ್ಬ, ಬಾನು ಮುಷ್ತಾಕ್ ಸೂಕ್ತ ಆಯ್ಕೆ”

ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ,”ದಸರಾ ನಾಡಹಬ್ಬ. ಇದು ಯಾವುದೇ ಧರ್ಮ ಅಥವಾ ಸಮುದಾಯಕ್ಕೆ ಸೀಮಿತವಲ್ಲ. ಎಲ್ಲಾ ಸಮುದಾಯದವರಿಗೂ ಸೇರಿರುವ ಹಬ್ಬ. ಬಾನು ಮುಷ್ತಾಕ್ ಅವರು ಸಾಹಿತ್ಯ, ಸಂಸ್ಕೃತಿಯಲ್ಲಿ ಅಪಾರ ಕೊಡುಗೆ ನೀಡಿರುವವರು. ಈ ಹಿಂದೆಯೂ ಕವಿ ನಿಸಾರ್ ಅಹಮದ್ ಅವರು ದಸರಾ ಉದ್ಘಾಟನೆ ಮಾಡಿದ್ದರು.”

ಆರ್. ಅಶೋಕ್ ಟೀಕೆಗೂ ತಿರುಗೇಟು

ವಿಪಕ್ಷ ನಾಯಕ ಆರ್ ಅಶೋಕ್ ಅವರು, “ಬಾನು ಮುಷ್ತಾಕ್ ದನದ ಮಾಂಸ ಸೇವಿಸುತ್ತಾರೆ, ಹೀಗಾಗಿ ಅವರು ದಸರಾ ಉದ್ಘಾಟನೆಗೆ ಅರ್ಹರಲ್ಲ” ಎಂಬ ಟೀಕೆ ಮಾಡಿದ್ದಾರೆ. ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ,”ಹೀಗೆ ಹೇಳುವವರು ಮನೋವೈಕಲ್ಯಕ್ಕೊಳಗಾದ ರೋಗಿಗಳು. ಅವರ ಮಾತುಗಳಿಗೆ ಪ್ರಾಮುಖ್ಯತೆಯೇ ಇಲ್ಲ.”

 ದಸರಾ ಆರಂಭಕ್ಕೆ ದಿನಾಂಕ ಘೋಷಣೆ

ಅಕ್ಟೋಬರ್ 3, 2025ರಂದು ಮೈಸೂರು ದಸರಾ ಕಾರ್ಯಕ್ರಮ ಆರಂಭವಾಗಲಿದೆ. ಉದ್ಘಾಟನೆಗೆ ಬಾನು ಮುಷ್ತಾಕ್ ಅವರ ಆಹ್ವಾನದಿಂದಾಗಿ ಕೆಲ ಹಿಂದುತ್ವ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದರೂ, ಸರ್ಕಾರ ತನ್ನ ನಿಲುವು ಹಿಮ್ಮೆಟ್ಟಿಸದೆ ಮುಂದುವರಿದಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *