ಕೆಮ್ಮು–ಶೀತ ಇದ್ದಾಗ ಬಾಳೆಹಣ್ಣು ಬೇಡವೇ?

ಕೆಮ್ಮು–ಶೀತ ಇದ್ದಾಗ ಬಾಳೆಹಣ್ಣು ಬೇಡವೇ?

ಹಳೆಯ ನಂಬಿಕೆ ಎಷ್ಟು ಸತ್ಯ?

ಸಾಮಾನ್ಯವಾಗಿ ಬಾಳೆಹಣ್ಣು ಎಲ್ಲಾ ಋತುವಿನಲ್ಲಿ ಸಿಗುವಂತಹ ಹಣ್ಣಾಗಿದ್ದರೂ ಕೂಡ ಕೆಮ್ಮು ಅಥವಾ ಶೀತ ಇರುವವರು, ಬಾಳೆಹಣ್ಣು ತಿನ್ನಬಾರದು ಎಂದು ಸಲಹೆ ನೀಡಲಾಗುತ್ತದೆ. ಏಕೆಂದರೆ ಅವು ಸ್ವಭಾವತಃ ಶೀತ ಸ್ವಭಾವದ್ದಾಗಿದ್ದು ದೇಹದಲ್ಲಿ ಲೋಳೆಯನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ. ಆದರೆ ಇದು ನಿಜವೇ? ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ತಿಳಿಯುವುದು ಬಹಳ ಮುಖ್ಯವಾಗುತ್ತದೆ. ಡಾ. ದೀಪಕ್ ಸುಮನ್ ಹೇಳುವ ಪ್ರಕಾರ, ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6 ಮಾತ್ರವಲ್ಲದೆ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಕೂಡ ಇದ್ದು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಬಾಳೆಹಣ್ಣು ತಿನ್ನುವುದರಿಂದ ಶೀತ ಉಂಟಾಗುತ್ತದೆ ಅಥವಾ ಶೀತ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಹೌದು, ಯಾರಿಗಾದರೂ ಕಫ ಸಮಸ್ಯೆ ಇದ್ದರೆ, ಬಾಳೆಹಣ್ಣು ತಿನ್ನುವುದರಿಂದ ಕಫ ಹೆಚ್ಚಾಗುತ್ತದೆ ಎಂಬುದು ನಿಜ. ಆದರೆ ಬಾಳೆಹಣ್ಣುಗಳು ಕೆಮ್ಮು ಅಥವಾ ಶೀತವನ್ನು ನೇರವಾಗಿ ಉಲ್ಬಣಗೊಳಿಸುವುದಿಲ್ಲ. ಆದರೆ ಮಲಬದ್ಧತೆ ಸಮಸ್ಯೆ ಇರುವವರು ಮಾತ್ರ ಬಾಳೆಹಣ್ಣಿನ ಸೇವನೆ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು ಎಂದಿದ್ದಾರೆ. ಈ ಬಗೆಗಿನ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಈ ಬಗ್ಗೆ ಆಯುರ್ವೇದ ಏನು ಹೇಳುತ್ತದೆ?

ಆಯುರ್ವೇದದಲ್ಲಿ ಬಾಳೆಹಣ್ಣು ಕಫವನ್ನು ಹೆಚ್ಚಿಸುತ್ತದೆ ಎಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ, ಶೀತ ವಾತಾವರಣದಲ್ಲಿ ಬಾಳೆಹಣ್ಣುಗಳನ್ನು ತಿನ್ನದಂತೆ ಸಲಹೆ ನೀಡಲಾಗುತ್ತದೆ. ಆಯುರ್ವೇದದ ಪ್ರಕಾರ, ಶೀತ ಸ್ವಭಾವದ ದೇಹವುಳ್ಳ ಜನರು ಬಾಳೆಹಣ್ಣುಗಳನ್ನು ತಿನ್ನುವುದರಿಂದ ಶೀತ ಮತ್ತು ಕೆಮ್ಮು ಹೆಚ್ಚಾಗುತ್ತದೆ ಎಂದು ಕಂಡುಕೊಳ್ಳಬಹುದು. ಆದರೆ ಸಾಮಾನ್ಯ ಸ್ವಭಾವದ ವ್ಯಕ್ತಿಗೆ ಸಾಮಾನ್ಯ ದಿನಗಳಲ್ಲಿ ಬಾಳೆಹಣ್ಣು ತಿಂದರೆ ಕೆಮ್ಮು- ಶೀತ ಬರುತ್ತದೆ ಅಥವಾ ಬಾಳೆಹಣ್ಣು ಕೆಮ್ಮು- ಶೀತವನ್ನು ಇನ್ನಷ್ಟು ಹದಗೆಡಿಸುತ್ತದೆ ಎಂಬುದು ನಿಜವಲ್ಲ.

ಬಾಳೆಹಣ್ಣು ಯಾರಿಗೆ ಒಳ್ಳೆಯದಲ್ಲ?

  • ಕಫ ಹೆಚ್ಚಾಗುವವರಿಗೆ
  • ಅಲರ್ಜಿಕ್ ರಿನಿಟಿಸ್ ರೋಗಿಗಳು
  • ಗಂಟಲಿನ ಸೋಂಕು ಅಥವಾ ಟಾನ್ಸಿಲ್ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *