ದಕ್ಷಿಣ ಕನ್ನಡ: ಜಿಲ್ಲೆಯ ಬೆಳ್ತಂಗಡಿಯಲ್ಲಿ ಎಸ್ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ಗಿರೀಶ್ ಮಟ್ಟಣ್ಣನವರ್ ಮಾಧ್ಯಮಗಳೊಂದಿಗೆ ಮಾತಾಡುತ್ತ, ಕಳೆದ ಎರಡು ತಿಂಗಳಿಂದ ಮಾಧ್ಯಮದವರು ಬಿಸಲು ಮಳೆ ಎನ್ನದೆ ಕೆಲಸ ಮಾಡುತ್ತಿದ್ದಾರೆ, ಅವರು ಪಡುತ್ತಿರುವ ಕಷ್ಟ ಅರ್ಥವಾಗುತ್ತದೆ, ಎಲ್ಲರೂ ವಾಸ್ತವಾಂಶಗಳನ್ನು ಆಧರಿಸಿ ವರದಿ ಮಾಡಲಿ, ನಮ್ಮ ವಿರುದ್ಧ ಪಿತೂರಿ, ಕುತಂತ್ರದ ಅರೋಪ ಬೇಡ, ಧರ್ಮಸ್ಥಳದ ಹೆಸರು ಹಾಳು ಮಾಡಲು ಮುಸ್ಲಿಂ ರಾಷ್ಟ್ರಗಳಿಂದ ಹಣ ಬರುತ್ತಿದೆ ಎಂದು ವರದಿಯಾಗುತ್ತಿದೆ,
ಎಸ್ಐಟಿಯವರು ಸರಿಯಾದ ನಿಟ್ಟಿನಲ್ಲಿ ತನಿಖೆ ಮಾಡುತ್ತಿದ್ದಾರೆ, ಅವರ ತನಿಖೆ ವೈಜ್ಞಾನಿಕವಾಗಿದೆ, ಅವರು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರ ಮತ್ತು ಸ್ಪಷ್ಟನೆಗಳನ್ನು ಕೊಟ್ಟಿದ್ದೇನೆ, ಮೊಬೈಲ್ ಜಮಾನಾದಲ್ಲಿ ಸುಳ್ಳು ಹೇಳಲಾಗುವುದಿಲ್ಲ ಎಂದು ಮಟ್ಟಣ್ಣನವರ್ ಹೇಳಿದರು.
For More Updates Join our WhatsApp Group :